April 20, 2024

Bhavana Tv

Its Your Channel

ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರಿಗೆ ಅಭಿನಂದನಾ ಕಾರ್ಯಕ್ರಮ

ಬೈಂದೂರು ; ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ ಮಹಾಗಣಪತಿ ದೇವಸ್ಥಾನ ನಾಡ ಗುಡ್ಡೆಅಂಗಡಿಯಲ್ಲಿ ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಕೆಲವೊಮ್ಮೆ ಹಿತ ಶತ್ರುಗಳ ನಮ್ಮ ಜೊತೆಯಲ್ಲಿ ಇರುತ್ತಾರೆ .ಇವರ ನಡುವೆನೇ ಪ್ರಾಮಾಣಿಕ ಕಾರ್ಯಕರ್ತ ತನ್ನ ಪ್ರಾಣವನ್ನ ಕೊಟ್ಟು ಅಭ್ಯರ್ಥಿಯನ್ನು ಗೆಲ್ಲಿಸುವ ಮುಖೇನ ನಿಜವಾದ ಕಾರ್ಯಕರ್ತನಾಗುತ್ತಾನೆ ಅಂತಹ ಕಾರ್ಯಕರ್ತರೇ ಪರಮಾತ್ಮನಾಗುತ್ತಾನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪದ್ದು ಪೂಜಾರಿ, ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಸತೀಶ್ ಎಂ ನಾಯಕ್ ನಾಡ,ಮಂಜುನಾಥ್ ಪೂಜಾರಿ ಸೇನಾಪುರ,ಕಿಶೋರ್ ಶೆಟ್ಟಿ,ಶಂಕರ್ ಶೆಟ್ಟಿ ಬೆಳ್ಳಾಡಿ, ಮಂಜುನಾಥ್ ಪೂಜಾರಿ ಬೆಳ್ಳಾಡಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.ಅಶೋಕ್ ಶೆಟ್ಟಿ ಸಂಸಾಡಿ ಸ್ವಾಗತಿಸಿದರು. ವಿಶ್ವನಾಥ್ ಪಡುಕೋಣೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ವರದಿ : ಎಚ್ ಸುಶಾಂತ್ ಬೈಂದೂರು

error: