ಕಾರ್ಕಳ. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಕಚೇರಿಯಿಂದ ಜನಾಗ್ರಹ ಅಂದೋಲನದ ಪ್ರತಿಭಟನೆಯ ರ್ಯಾಲಿಯನ್ನು ಶಾಸಕರ ಕಚೇರಿಯ ಬಳಿ ಬರುತ್ತಿದ್ದಂತೆ ರ್ಯಾಲಿಯನ್ನು ಪೊಲೀಸರು ತಡೆ ಹಿಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಜನಾಗ್ರಹ ಅಂದೋಲನ ಎಂಬುದು ಹಿಂದೆAದೂ ಕಾಣದಂಥ ಸಂಕಷ್ಟಗಳಿಗೆ ಸಿಲುಕಿರುವ ಒಕ್ಕೊರಲ ಕೂಗು ಆಗಿದೆ. ಕರೋನ ಎರಡನೇ ಅಪ್ಪಳಿಸಿದಿಂದಾಗಿನಿAದ ಒಂದೆಡೆ ಜನರನ್ನು ಉಳಿಸುವ ನೆರವು ಕಾರ್ಯಾಚರಣೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಮತ್ತೊಂದೆಡೆ ಸರ್ಕಾರ ತೆಗೆದುಕೊಳ್ಳಲು ತೆಗೆದುಕೊಳ್ಳಬೇಕಾಗಿರುವ ತುರ್ತು ಕ್ರಮಗಳಿಂದಾಗಿ ನಿರಂತರವಾಗಿ ಒತ್ತಾಯಿಸುತ್ತಾ ಬರುತ್ತಿದ್ದೇವೆ ನಾಡಿನ ಏಳುನೂರಕ್ಕೂ ಹೆಚ್ಚು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮೂರು ಪತ್ರಗಳನ್ನು ಬರೆದಿದ್ದೇವೆ ಅದರಲ್ಲಿ ಸರ್ಕಾರ ತೆಗೆದುಕೊಳ್ಳದೆ ಕೊಳ್ಳಲೇ ಬೇಕಿರುವ ಕ್ರಮಗಳು ಏನು ಅದಕ್ಕೆ ತಗಲುವ ವೆಚ್ಚವೆಷ್ಟು ಎಂಬುದನ್ನು ಅಂಕಿಯ ಅಂಕಿ-ಸAಖ್ಯೆಗಳ ಸಮೇತ ಖಚಿತ ಪ್ರಸ್ತಾಪ ಮುಂದಿಟ್ಟ ಬಂದಿದ್ದೇವೆ ಕೋವಿಡ್ ಇಕ್ಕಟ್ಟುಗಳ ನಡುವೆಯೂ ಎರಡು ಬಾರಿ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಎಂದು ಹೇಳಿದರು.
ನಂತರ ಮಾತನಾಡಿದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಬಡ ಕುಟುಂಬಗಳಿಗೂ ಸಮಗ್ರ ಆಹಾರದ ಕಿಟ್ ವಿತರಿಸಬೇಕು. ಮತ್ತು ಕನಿಷ್ಠ ೫೦೦೦ ರೂ ಹಾರ್ದಿಕ ನೆರವು ನೀಡಬೇಕು. ಅನಾಥ ಗೊಂಡಿರುವ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ೫ ಲಕ್ಷ ಪರಿಹಾರ ನೀಡಬೇಕು. ರೈತರು ಬಿತ್ತನೆ ಬೀಜ ಗೊಬ್ಬರಕ್ಕೆ ವಿಶೇಷ ಸಬ್ಸಿಡಿ ನೀಡಬೇಕು ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಬೇಕು ಬದುಕು ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತ ಗೊಳಿಸಬೇಕು ವೇಸೈನ್ ಅಭಿಯಾನವನ್ನು ಯೋದ್ದು ಪದಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ನಮ್ಮ ಶಾಸಕರು ಇದು ಯಾವುದು ಲೆಕ್ಕಿಸದೆ ಕೇವಲ ಬಿಳಿ ಬೆಂಡೆ ಬೀಜ ವಿತರಿಸುವಲ್ಲಿ ಬಿಜಿಯಾಗಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ನೀರೇ ಕೃಷ್ಣಶೆಟ್ಟಿ, ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಸೇವಾದಳ ಅಧ್ಯಕ್ಷ ಸುಶಾಂತ್ ನಗರ ಕಾಂಗ್ರೆಸ್ ಅಧ್ಯಕ್ಷ ಮಧು ರಾಜ ಶೆಟ್ಟಿ, ನವೀನ್ ದೇವಾಡಿಗ, ಅಣ್ಣಪ್ಪನಕ್ರೆ, ಪ್ರತಿಮಾ ರಾಣಿ, ರಹಮತ್ ಮುಂತಾದವರು ಭಾಗವಹಿಸಿದ್ದರು
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.