March 28, 2024

Bhavana Tv

Its Your Channel

ಜನ್ಮದಿನಾಚರಣೆಯ ಪ್ರಯುಕ್ತ ಮೊಹಮ್ಮದ್ ಗೌಸ್‌ರವರು ಸುಮಾರು ೬೦ ಮಕ್ಕಳಿಗೆ ಕಲಿಕೆ ಸಾಮಗ್ರಿ ವಿತರಣೆ

ಕಾರ್ಕಳ ಸರಕಾರಿ ಉರ್ದು ಪ್ರಾರ್ಥಮಿಕ ಶಾಲೆಯಲ್ಲಿ ವಿಶಿಷ್ಟವಾದ ಜನ್ಮದಿನಾಚರಣೆಯನ್ನು ಜಿಲ್ಲಾ ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಉದ್ಯಮಿ ಮೊಹಮ್ಮದ್ ಗೌಸ್ ಸುಮಾರು ೬೦ ಮಕ್ಕಳಿಗೆ ಕಲಿಕೆ ಸಾಮಗ್ರಿಗಳನ್ನು ನೀಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದರು ಈ ವಿಶಿಷ್ಟ ಕಾರ್ಯಕ್ರಮವನ್ನು ಮೊಹಮ್ಮದ್ ಗೌಸ್ ಸುಮಾರು ೧೭ ವರ್ಷದಿಂದ ಆಚರಿಸುತ್ತಾ ಬಂದಿರುವುದು ಅವರ ವಿಶೇಷತೆಯಾಗಿದೆ
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ತಾಲೂಕು ಪತ್ರಕರ್ತರ ಅಧ್ಯಕ್ಷ ಮೊಹಮ್ಮದ್ ಷರೀಫ್ ಕಳೆದ ಒಂದು ವರ್ಷದಿಂದ ನಾವು ಲಾಕ್ಡೌನ್ ಸಂಕಷ್ಟ ಸಮಯದಲ್ಲಿ ಉದ್ಯೋಗವಿಲ್ಲದೆ ಬಳಲುತ್ತಿರುವಾಗ ಮೊಹಮ್ಮದ್ ಗೌಸ್ ಪತ್ರಕರ್ತರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನ ರಿಕ್ಷಾ ಚಾಲಕರಿಗೂ ಹಾಗೂ ದಿನಕೂಲಿ ವರ್ಗದವರಿಗೂ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆಯನ್ನು ತೋರಿಸಿದ್ದಾರೆ. ಅದಲ್ಲದೆ ಈ ಸಲ ಲಾಕ್ಡೌನ್ ಸಂದರ್ಭದಲ್ಲಿ ಸುಮಾರು ೩೦ ಪತ್ರಕರ್ತರಿಗೆ oxi meಣಚಿಡಿ ಗಳನ್ನು ಹಂಚಿದ್ದಾರೆಎAದು ಹೇಳಿದರು ನಂತರ ಮಾತನಾಡಿದ ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಚಿsಜಿಚಿq ಚಿhಚಿmeಜ ಮಾತನಾಡಿ ಕಾರ್ಕಳ ಉರ್ದು ಶಾಲೆಗೆ ಸುಮಾರು ೧೧೦ ವರ್ಷದ ಇತಿಹಾಸವಿದ್ದು ಉಭಯ ಜಿಲ್ಲೆಗಳ ಬಹುತೇಕ ಉರ್ದು ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟಿವೆ ಆದರೆ ಕಾರ್ಕಳದ ಉರ್ದು ಶಾಲೆ ಇಂತ ದಾನಿಗಳ ಸಹಾಯದಿಂದ ಉಳಿದುಕೊಂಡಿದೆ ಎಂದು ಹೇಳಿದರು ಲಾಕ್ಡೌನ್ ಸಂದರ್ಭದಲ್ಲಿ ಸುಮಾರು ಒಂದು ವರ್ಷದಿಂದ ಶಾಲೆಗಳಲ್ಲಿ ಪಾಠ ಇಲ್ಲದಂತಾಗಿದೆ. ಮಕ್ಕಳಿಗೆ ಮೊಬೈಲ್ ನಲ್ಲಿ ಪಾಠ ಮಾಡು ಸಂದರ್ಭ ಬಂದಿದೆ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಮೊಬೈಲ್ ದುರ್ಬಳಕೆ ಆಗುವುದು ಹೆಚ್ಚಾಗಿದೆ. ಪೋಷಕರು ಮಕ್ಕಳ ಕೈಯಲ್ಲಿರುವ ಮೊಬೈಲ್ ನ ಮೇಲೆ ನೀಗಾ ಪೋಷಕರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಜಮಾತುಲ್ ಘಟಕದ ಅಧ್ಯಕ್ಷರಾದ ಯಕುಬ್ ಸಾಹೇಬ್, ಉಭಯ ಜಿಲ್ಲಾ ಜಮಾತುಲ್ ಫಾಲ್ಲಹ ಘಟಕದ ಉಪಾಧ್ಯಕ್ಷರಾದ ಸೈಯ್ಯದ ಹಸನ್, ಅಬ್ದುಲ್ ರಶೀದ್, ನಾಸಿರ್ ಇಂಜಿನಿಯರ್, ಎಜಾಜ್ ಶರೀಫ್ ಉಪಸ್ಥಿತರಿದ್ದು ಮುಖ್ಯ ಮುಖ್ಯ ಉಪಾಧ್ಯಾಯರಾದ ಶೇಕ್ ಸಮಿಉಲ್ಲಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

error: