ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಕಳ ರೋಟರಿ ಬಾಲವನದಲ್ಲಿ ಇಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಪು ಪತ್ರಕರ್ತ ಸಂಘದ ಸದಸ್ಯ ,ಸಾಹಿತಿ ಪುಂಡಲೀಕ ಮರಾಠೆ ಮಾತನಾಡಿ ಪತ್ರಿಕೆಗಳೆಂದರೆ ಮಿನಿವಿಶ್ವಕೋಶವಿದ್ದಂತೆ ,
ಸಂವಿಧಾನದ ಬದ್ದತೆಯಿಂದ ಸಾಮಾಜಿಕ ಕಷ್ಟಗಳು ವಿಚಾರವನ್ನು ಪತ್ರಿಕೆಗಳ ಜನರನ್ನು ಮುಟ್ಟಿಸುವುದು ಆಗಿದೆ. ಪತ್ರಿಕೆ ಪಾರದರ್ಶಕವಾಗಿದ್ದು ವಸ್ತುನಿಷ್ಠ ,ನಿಖರ ,ಜನಸಾಮಾನ್ಯರ ಜಾಗೃತಿಯನ್ನು ಮೂಡಿಸುವುದಾಗಿದೆ, ಎಂದರು.
ಮುಖ್ಯ ಅತಿಥಿ ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಮಾತಾನಾಡಿ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದು ಹಾಗೂ ಮಾನವೀಯ ಮೌಲ್ಯಗಳನ್ನು ಮಿಡಿಯಲ್ಲಿ ಪತ್ರಿಕಾರಂಗ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು. ಕಾ.ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷ ತೆ ವಹಿಸಿದ್ದರು.ಸಭೆಯಲ್ಲಿ ಜಿಲ್ಲಾ ಕಾ.ನಿ.ಪತ್ರಕರ್ತ ಸಂಘದ ಉಪಾಧ್ಯಕ್ಷ ಆರ್.ಬಿ.ಜಗದೀಶ್ , ಜಿಲ್ಲಾ ಸಂಘದ ಸದಸ್ಯ ಹರಿಪ್ರಸಾದ್ ನಂದಳಿಕೆ, , ರೊಟರಿ ಕ್ಲಬ್ನ ರೊಟಾರಿಯನ್ ಇಕ್ಬಾಲ್ ಅಹಮದ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನಿಸಲಾಯಿತು
ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿದರು,ಕಾರ್ಕಳ ಪತ್ರಕರ್ತ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಪ್ ಪ್ರಸ್ತಾವನೆಗೈದರು, ಶರತ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ್ ಧನ್ಯವಾದ ಅಭಿನಂದಿಸಿದರು
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.