ಕಾರ್ಕಳ ಹೋಟೆಲ್ ಪ್ರಕಾಶ್ನಲ್ಲಿ ಅರ್ಥ್ ಮೂವರ್ಸ್ ಎಸೋಸಿಯೇಶನ್ ಪತ್ರಿಕಾಗೋಷ್ಠಿ: ಅರ್ಥ್ ಮೂವರ್ಸ್ ಒಕ್ಕೂಟ ರಚನೆ. ದರ ಪರಿಷ್ಕರಣೆ. ಜೆಸಿಬಿ, ಹಿಟಾಚಿ, ಟಿಪ್ಪರ್ ವಾಹನ ಮಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಒಂದೆ ವೇದಿಕೆಯಡಿ ಬಗೆಹರಿಸುವ ಉದ್ದೇಶದಿಂದ ಕಾರ್ಕಳ, ಮೂಡಬಿದಿರೆ ಬೆಳ್ತಂಗಡಿ ಮತ್ತು ಬಂಟ್ವಾಳ ವಲಯಗಳ ಅರ್ಥ್ ಮೂವರ್ಸ್ ಒಕ್ಕೂಟ ರಚಿಸಲಾಗಿದೆ ಎಂದು ಅಧ್ಯಕ್ಷ ವಿನಯ ಹೆಗ್ಡೆ ತಿಳಿಸಿದ್ದಾರೆ.
ಪ್ರಕಾಶ್ ಹೊಟೇಲ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಧಕ ಬಾಧಕಗಳನ್ನು ಪರಿಗಣಿಸಿ ಉದ್ಯಮದ ಉಳಿವಿಗಾಗಿ ಗ್ರಾಹಕರ ಹಿತ ಚಿಂತನೆಯನ್ನು ಗಮನದಲ್ಲಿರಿಸಿಕೊಂಡು ಬಾಡಿಗೆ ದರಗಳ ನವೀಕರಿಸುವುದು ನಮಗೆ ಅನಿವಾರ್ಯವಾಗಿದೆ. ಡೀಸೆಲ್ ಬೆಲೆ ಏರಿಕೆ ನಿರ್ವಹಣಾ ವೆಚ್ಚ, ಚಾಲಕರ ವೇತನದಲ್ಲಿ ಏರಿಕೆಯಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡದೆ ಅನ್ಯ ದಾರಿಯಿಲ್ಲ. ಈ ದರ ಮುಂದಿನ ದೀಪಾವಳಿ ತನಕ ಚಾಲ್ತಿಯಲ್ಗಿರುತ್ತದೆ ಎಂದರು.ಜೆಸಿಬಿ ಹಿಟಾಚಿ ಮತ್ತು ಟಿಪ್ಪರ್ ಬಾಡಿಗೆಯನ್ನು ಹತ್ತು ವರ್ಷಗಳ ಸುದೀರ್ಘ ಅವಧಿ ಬಳಿಕ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ತಾಸಿಗೆ ಹಿಟಾಚಿ ೧೩೦೦ ರೂ. ಜೆಸಿಬಿ ೧೨೦೦ ರೂ.ಸಣ್ಣ ಹಿಟಾಚಿ ರೂ. ೧೧೦೦, ದಿನಕ್ಕೆ ಟಿಪ್ಪರ್ ರೂ ೭ಸಾವಿರ. ಹಿಟಾಚಿ ಸಾಗಟ ವೆಚ್ಚ ೫ ಕಿ.ಮೀ ವ್ಯಾಪ್ತಿಯೊಳಗೆ ೨ಸಾವಿರ ರೂ. ಏರಿಕೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಒಕ್ಕೂಟ ಪದಾಧಿಕಾರಿಗಳಾದ ಪ್ರಕಾಶ್, ಆಲ್ವಿನ್ ಮೆನೆಜಸ್, ಆದಿರಾಜ್ ಜೈನ್ ಭರತ್ ಕುಮಾರ್, ಅಶೋಕ ಎಚ್ ಎಂ, ಕರುಣಾಕರ ಭಂಡಾರಿ, ಉದಯಕುಮಾರ್. ಕೇಂದ್ರ ಸಮಿತಿ ಸದಸ್ಯರ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.
ಬಿದ್ಕಲ ಕಟ್ಟೆಯ ಶ್ರೀ ನಾಗಲಕ್ಷ್ಮಿ ಸಭಾಭವನದಲ್ಲಿ ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗ