April 19, 2024

Bhavana Tv

Its Your Channel

ಜೋಡುರಸ್ತೆ ಕಾರ್ಕಳ ಪೂರ್ಣಿಮಾ ಲೈಪ್ ಸ್ಟೈಲ್ ಒಳಾಂಗಣ ವಿನ್ಯಾಸಕ್ಕೆ ಚಾಲನೆ

ಕಾರ್ಕಳ : ನಗರದ ಜೋಡುರಸ್ತೆಯ ಪ್ರೈಮ್ ಮಾಲ್‌ನ ದ್ವಿತೀಯ ಮಹಡಿಯಲ್ಲಿ ಕಾರ್ಕಳದ ಪ್ರಸಿದ್ದ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯ ನೂತನ ಪೂರ್ಣಿಮಾ ಲೈಫ್ ಸ್ಟೈಲ್ ಒಳಾಂಗಣ ವಿನ್ಯಾಸದ ಚಾಲನಾ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಪ್ರಶಸ್ತಿ ವಿಜೇತ, ಕಾರ್ಕಳದ ಹಿರಿಯ ನ್ಯಾಯವಾದಿ ಎಮ್. ಕೆ. ವಿಜಯ್ ಕುಮಾರ್ ಅವರು ಮಾತನಾಡುತ್ತಾ ರವಿಪ್ರಕಾಶ್ ಪ್ರಭುರವರ ಯೋಜನೆಯಿಂದ ಬಹಳ ಜನರಿಗೆ ಸ್ವದ್ಯೋಗ ಇತರರಿಗೆ ಉದ್ಯೋಗ ನೀಡುವ ಅವಕಾಶವಿದೆ ಎಂದು ತಿಳಿಸಿದರು. ರಾಜಾಪುರ ಸಾರಸ್ವತ ಕ್ರೇಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭುರವರು ಅಭಿವೃದ್ಧಿಗೊಳ್ಳುತ್ತಿರುವ ಜೋಡುರಸ್ತೆಯಲ್ಲಿ ಇಂತಹ ಸಂಸ್ಥೆ ಅವಶ್ಯವೆಂದರು. ಕಾರ್ಕಳ ಹಿರಿಯಂಗಡಿ ಶಿವತಿಕೆರೆ ದೇವಾಸ್ಥಾನದ ಧರ್ಮದರ್ಶಿ, ಕುಂದಾಪುರ ಸಹಾನ ಗ್ರೂಪ್ ಅಧ್ಯಕ್ಷ, ಸುರೇಂದ್ರ ಶೆಟ್ಟಿ ಕಾರ್ಕಳದ ಉಧ್ಯಮಿಗಳು ಕಾರ್ಕಳ ತಾಲೂಕಿನಲ್ಲಿಯೇ ಹಲವು ಉದ್ಯಮಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗವನ್ನು ದೊರಕಿಸುವ ಕಾರ್ಯಕ್ಕೆ ಶುಭಹಾರೈಸಿದರು. ಸಮಾರಂಭದಲ್ಲಿ ನ್ಯಾಯಾವಾದಿ ಶೇಖರ್ ಮಡಿವಾಳ, ಪ್ರೈಮ್ ಮಲ್ ಮಾಲಕ ಮಹಾವೀರ್ ಹೆಗ್ಡೆ, ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಎಸ್. ಮರಬಳ್ಳಿ, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಉದಯ್ ಎಸ್. ಕೊಟ್ಯಾನ್ ನ್ಯಾಯವಾದಿ ಸುವೃತ್ ಕುಮಾರ್, ಉದ್ಯಮಿ ನಿತ್ಯಾನಂದ ಪೈ, ಸಚ್ಚಿನ್ ಕೋಟ್ಯಾನ್, ಚೆನೈ ಅಮರ್ ಆರ್ಕಿಟೆಕ್ ಎಂಡ್ ಡಿಸೈನಿಂಗ್‌ನ ಸತೀಶ್ ಪಿಳ್ಳೆ, ಮಾರುತಿ ಡಿಸೈನಿಂಗ್ನ ಆರ್. ಬಾಲಕೃಷ್ಣ, ಗೋವಿಂದ ರಾಜ್, ಪೂರ್ಣಿಮಾ ಸಂಸ್ಥೆಯ ಉಮನಾಥ್ ಪ್ರಭು, ಹರಿಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ರವಿಪ್ರಕಾಶ್ ಪ್ರಭುರವರು ಪೂರ್ಣಿಮಾ ಲೈಪ್ ಸ್ಟೈಲ್ ನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಟ್ಟೆ ಅಂಗಡಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಲೇಡೀಸ್ ಬ್ಯೂಟಿ ಸ್ಪಾ, ಅಲಂಕಾರಿಕ ವಸ್ತುಗಳನ್ನು ಒಳಗೊಂಡ ಕೊಸ್ ಮೆಟಿಕ್ ಶಾಪ್, ಇಮಿಟೇಷನ್ ಜ್ಯುವೆಲ್ಲರಿ, ಬುರ್ಖ ಶಾಪ್, ಪಿಜ್ಜಾ ಬರ್ಗರ್ ಶಾಪ್, ಜ್ಯೂಸ್ ಸೆಂಟರ್, ಪುರುಷರು ಮಹಿಳೆಯರ ವಿಶೇಷ ವಿನ್ಯಾಸದ ಆಕರ್ಷಕ ಬ್ರಾಂಡೆಡ್ ಮಳಿಗೆ ಎಲ್ಲವೂ ಹವಾನಿಯಂತ್ರಿತವಾಗಿದ್ದು ಮಳಿಗೆಯನ್ನು ಅತ್ಯಂತ ಸ್ಪರ್ದಾತ್ಮಕ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು ಕಿರಣ ರವಿಪ್ರಕಾಶ್ ಪ್ರಭು ಸ್ವಾಗತಿಸಿದರು.

error: