April 25, 2024

Bhavana Tv

Its Your Channel

ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿದ ಸಚಿವ ವಿ. ಸುನೀಲ್‌ ಕುಮಾರ್

ಕಾರ್ಕಳ:- ಕಾರ್ಕಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ನಾಡೋಜ ಡಾಕ್ಟರ್ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಮತ್ತು ಸಂಘಸAಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ತಾಲೂಕು ಸರಕಾರಿ ಆಸ್ಪತ್ರೆ ಕಾರ್ಕಳ ಇಂದು ಸುಮಾರು ೭೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ೩೦೦ ಐ.ಪಿಎಮ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ಆಮ್ಲಜನಕ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಥಮವಾದ ಆಮ್ಲಜನಕ ಉತ್ಪಾದನೆ ಘಟಕ ಇದಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಕಾಲಕಾಲಕ್ಕೆ ತಕ್ಕಂತೆ ಉನ್ನತಿಕರಣ ಗೊಳಿಸುವಂತಹ ಕೆಲಸ ಈಗಾಗಲೆ ನಡೆಯುತ್ತದೆ. ಕರೋನಾ ಮೊದಲನೆಯ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದವರಿಗೆ ಅತ್ಯುತ್ತಮ ರೀತಿಯಲ್ಲಿ ಕ್ವಾರಂಟೈನ್ ಸಂದರ್ಭದಲ್ಲಿ ಉತ್ತಮ ಸೇವೆಯನ್ನು ನೀಡಿದ್ದು ರಾಜ್ಯದಲ್ಲಿ ಪ್ರಥಮವಾದ ಕಾರ್ಕಳ ವಾಗಿರುತ್ತದೆ. ಎರಡನೆಯ ಅಲೆ ಬಂದ ಸಂದರ್ಭದಲ್ಲಿ ಕಾರ್ಕಳದ ಎಲ್ಲಾ ಕಡೆ ಅತ್ಯುತ್ತಮವಾಗಿ ಲಸಿಕೆ ನೀಡುವಲ್ಲಿ ನಾವು ಸಫಲವಾಗಿ ದ್ದೇವೆ.
ಕರೋನಾ ಮೂರನೇ ಅಲೆ ಬರಬಹುದಾದ ಸಂದರ್ಭದಲ್ಲಿ ಅದನ್ನು ಯಶಸ್ವಿಯಾಗಿ ತಡೆಗಟ್ಟಲು ದಾನಿಗಳ ಸಹಾಯದಿಂದ ಆಮ್ಲ ಜನಕದ ಉತ್ಪಾದನೆ ಘಟಕವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಅವರು ಮಾತನಾಡಿ ಮೊದಲೇ ಅಲೆ ಬಂದಾಗ ಜನರು ನಂಬಲಿಲ್ಲ ಎರಡನೇ ಅಲೆ ಬಂದಾಗ ಸಮಾಜದಲ್ಲಿ ಉಂಟಾದ ಸಾವು ನೋವು ಹಾಗೂ ಏರುಪೇರಿನಿಂದಾಗಿ ಎಲ್ಲರ ಅದರ ಪರಿಣಾಮ ಎದುರಿಸಿದರು ಇಂದು ನಮ್ಮ ಸಚಿವರು ಮುಂಬರುವ ಕರೋನಾ ಮೂರನೇ ಅಲೆ ಎದುರಿಸಲು ಅತಿಶೀಘ್ರವಾಗಿ ಮಹತ್ವದ ಹೆಜ್ಜೆ ಇಟ್ಟು ಉತ್ಪಾದನೆ ಘಟಕವನ್ನು ನಿರ್ಮಾಣ ಮಾಡಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ದಾನಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಡಾಕ್ಟರ್ ಜಿ ಶಂಕರ್, ಸಂತೋಷ್ ಡಿಸಿಲ್ವಾ, ಕಡಾರಿ ರವೀಂದ್ರ ಪ್ರಭು, ಬೋಳ ದಾಮೋದರ್ ಕಾಮತ್, ಸುಮ ಕೇಶವ್, ಮನಿ ರಾಜ್ ಶೆಟ್ಟಿ, ರೂಪ ಶೆಟ್ಟಿ, ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಕೆ ಸುಬ್ರಹ್ಮಣ್ಯ ರಾವ್ ಮುಂತಾದ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: