April 25, 2024

Bhavana Tv

Its Your Channel

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ೨೦ ದಿನಗಳ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದ ಭಾಗವಾಗಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಕಾರ್ಕಳ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಇಂದು ನೇರವೇರಿತು. ಮಂಡಲ ಅಧ್ಯಕ್ಷರಾದ ಮಹಾವೀರ ಹೆಗ್ಡೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶನಿವಾರ ಕಾರ್ಕಳ ಮಂಡಲದ ೨೦೯ ಬೂತ್‌ಗಳಲ್ಲಿ ಪಂಡಿತ್ ಜೀಯವರ ಜನ್ಮ ದಿನಾಚರಣೆ ನಡೆಯುವುದು ಈ ವರ್ಷದ ವಿಶೇಷವಾಗಿರುತ್ತದೆ.

ಕೇರಳ ರಾಜ್ಯದ ವಕ್ತಾರ ಸಂದೀಪ್ ವಾರಿಯರ್ ಕಾರ್ಕಳ ಬಿಜೆಪಿ ಪಕ್ಷದ ಕಚೇರಿ ಗೆ ಭೇಟಿ ನೀಡಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಂಡಿತ್ ದೀನ್ ದಯಾಳ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಕೇರಳ ರಾಜ್ಯದ ಕೋವಿಡ್ ಕುರಿತು ಅಲ್ಲಿನ ಪರಿಸ್ಥಿತಿ ಯ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅನುಷ್ಠಾನದ ಜಿಲ್ಲಾ ಸಂಚಾಲಕರಾದ ಸವಿತಾ ಕೋಟ್ಯಾನ್, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಜಯರಾಮ್ ಸಾಲ್ಯಾನ್, ನವೀನ್ ನಾಯಕ್ ಕಾರ್ಯದರ್ಶಿಗಳಾದ ಅನಂತ್‌ಕೃಷ್ಣ ಶೆಣೈ, ಶಂಕರ್ ಕುಂದರ್, ಪಕ್ಷದ ವಕ್ತಾರ ಕೆ.ಎಸ್. ಹರೀಶ್ ಶೆಣೈ, ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್, ಸದಸ್ಯ ನಿರಂಜನ್ ಜೈನ್, ಎಸ್, ಸಿ. ಮೋರ್ಚಾ ತಾಲೂಕು ಉಸ್ತುವಾರಿ ಶ್ರೀನಿವಾಸ್ ಕಾರ್ಲ, ಕಛೇರಿ ವ್ಯವಸ್ಥೆ ಪಮುಖರಾದ ಕೆ. ಸುಧಾಕರ್ ಪೂಜಾರಿ, ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: