April 19, 2024

Bhavana Tv

Its Your Channel

ಉಚಿತ ಆಯುಷ್ಮಾನ್ ನೋಂದಣಿ ಮತ್ತು ಅಸಂಘಟಿತ ಕಾರ್ಮಿಕರ ಕಾರ್ಡ ನೋಂದಣಿ ಕಾರ್ಯಕ್ರಮ

ಕಾರ್ಕಳ: ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ ,ಸೇವಾ ಸಿಂಧು ಸೈಬರ್ ಝೋನ್ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಉಚಿತ ಆಯುಷ್ಮಾನ್ ನೋಂದಣಿ ಮತ್ತು ಅಸಂಘಟಿತ ಕಾರ್ಮಿಕರ ಕಾರ್ಡ ನೋಂದಣಿ ಆದಿತ್ಯವಾರ ಬೆಳಿಗ್ಗೆ ಘ.೯-೦೦. ರಿಂದ ಸಾಯಂಕಾಲ ಘ ೪-೦೦ವರೆಗೆ ಗುಂಡ್ಯ ಡ್ಕ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿವಾಕರ್ ಕುಮಾರ್ ವಹಿಸಿದ್ದರು.ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ಶೋಭಾ ಭಾಸ್ಕರ್ ಕಾರ್ಯದರ್ಶಿ, ಸಾಲೂಮನ್ ಆಳ್ವರಿಸ್ ಮಾಲಕ ಸೇವಾ ಸಿಂಧು ಸೈಬರ್ ಝೋನ್ ಕಾರ್ಕಳ, ಶ್ರೀಯುತ ವಿವೇಕ್ ,ಸಂಯೋಜಕರು ಶಿಕ್ಷಣ ಸಂಪನ್ಮೂಲ ಕೇಂದ್ರ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ತಿಲೋತ್ತಮ ನಾಯಕ್ ,ಮುರುಗೇಶ್ ಅಯ್ಯಪ್ಪ ಸ್ವಾಮಿ ಮಂದಿರ,ವನಿತಾ ಅಂಗನವಾಡಿ ಕಾರ್ಯಕರ್ತೆ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ,ಸದಸ್ಯರಾದ ರೇಷ್ಮಾ ಭಂಡಾರಿ,ಸುಚಿತ್ರ ಶೆಟ್ಟಿ,ಸುಧೀರ್ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಅರುಣ್ ಭಟ್ ಕಾರ್ಕಳ.

error: