April 25, 2024

Bhavana Tv

Its Your Channel

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯವರನ್ನು ಗೆಲ್ಲಿಸುವುದು ನಮ್ಮ ಗುರಿ – ಭರತ್ ಮುಂಡೋಡಿ

ಕಾರ್ಕಳ: ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯವರನ್ನು ಗೌರವಪೂರ್ವಕವಾಗಿ ಗೆಲ್ಲಿಸುವುಸುವುದು ನಮ್ಮ ಗುರಿಯಾಗಿದ್ದು ಆ ನೆಲೆಯಲ್ಲಿ ಪ್ರತೀ ಗ್ರಾಮ ಮಟ್ಟದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಕಾರ್ಕಳ ವಿಧಾನ ಪರಿಷತ್ ಚುನಾವಣಾ ಉಸ್ತುವಾರಿ ಭರತ್ ಮುಂಡೋಡಿ ಹೇಳಿದ್ದಾರೆ.

    ಅವರು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಿದ್ದರು. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಒಟ್ಟು ೧೧೦ ಮತಗಳಿವೆ. ಇದರಲ್ಲಿ ೧೧ಮತಗಳು ಪುರಸಭಾ ಸದಸ್ಯರದ್ದು ಹಾಗೂ ೯೯ ಗ್ರಾಮ ಪಂಚಾಯತ ಸದಸ್ಯರದ್ದು. ಅಲ್ಲದೆ ೨೪ ಪಕ್ಷಾತೀತ ನೆಲೆಯ ಸ್ವತಂತ್ರ ಸದಸ್ಯರ ಮತಗಳಿವೆ. ಇವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಬೆಂಬಲಿತರೇ ಆಗಿದ್ದಾರೆ ಎಂದು ಹೇಳಿದ್ದಾರೆ. 

ಪತ್ರಿಕಾ ಗೋಷ್ಠಿಯಲ್ಲಿ ಹೆಬ್ರಿ ವಿಧಾನ ಪರಿಷತ್ ಚುನಾವಣಾ ಉಸ್ತುವಾರಿ ಪಾರೂಕ್ ಉಳ್ಳಾಲ್, ಹೆಬ್ರಿ ಬ್ಲಾಕ್ ಅದ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ ಬಂಗೇರ, ಸುಶಾಂತ್ ಸುಧಾಕರ, ಜೋರ್ಜ್ ಕ್ಯಾಸ್ತಲಿನೋ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: