April 25, 2024

Bhavana Tv

Its Your Channel

ಜ. 14ರಂದು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ ಕಾರ್ಪೊರೇಟ್ ಕಚೇರಿ ಉದ್ಘಾಟನೆ

ಕಾರ್ಕಳ:- ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ ಕಾರ್ಪೊರೇಟ್ ಕಚೇರಿ ಇದೇ ತಿಂಗಳು 14 ರಂದು 11ಗಂಟೆಗೆ ಶ್ರೇಯಸ್ ಕಟ್ಟಡದಲ್ಲಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ.

ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮತ್ತು ಸಂಸದರಾದ ನಳಿನ್ ಕುಮಾರ್ ವಹಿಸಲಿದ್ದು, ಶೋಭಾ ಕರಂದ್ಲಾಜೆ ಚಿನ್ನಾಭರಣ ಮತ್ತು ಭದ್ರತೆ ಕೊಠಡಿ ಉದ್ಘಾಟನೆ ಮಾಡುವರು ಕಾರ್ಪೊರೇಟ್ ಕಚೇರಿ ಉದ್ಘಾಟನೆಯನ್ನು ಧರ್ಮಸ್ಥಳ ಕ್ಷೇತ್ರದ ಡಿ. ಹರ್ಷೇಂದ್ರ ಕುಮಾರ್ , ಶಾಖಾ ಉದ್ಘಾಟನೆಯನ್ನು ಹಿರಿಯ ನ್ಯಾಯವಾದಿಗಳಾದ ಎಂಕೆ ವಿಜಯಕುಮಾರ್ ಹಾಗೂ ಗಣಕಯಂತ್ರ ಮತ್ತು ತಂತ್ರಾAಶ ಉದ್ಘಾಟನೆಯನ್ನು ಉದ್ಯಮಿ ಬೋಳ ಪ್ರಭಾಕರ ಕಾಮತ್ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುವೃತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜನತೆಗೆ ಉತ್ತಮ ಸೇವೆಗಳನ್ನು ಕೊಡಬೇಕು ಈ ಸಂಸ್ಥೆ ಕೇವಲ ಲಾಭಕ್ಕಾಗಿ ಆರಂಭ ಮಾಡುವುದಿಲ್ಲ. ಸಾಮಾಜಿಕ ಕಳಕಳಿಯನ್ನು ಮುಂದಿಟ್ಟುಕೊoಡು ಈ ಸಂಸ್ಥೆಯನ್ನು ಮುಂದುವರಿಸುತ್ತೇವೆ. ಇದರ ಜೊತೆಗೆ ಆಕ್ಸಿಜನ್ ಬ್ಯಾಂಕನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಬರ್ಟ್ ರೊನಾಲ್ಡ್ ಫರ್ನಾಂಡಿಸ್, ಆರ್ಥಿಕ ಸಲಹೆಗಾರರಾದ ಮೋಹನ ಪಡಿಯಾರ್, ಮುಖ್ಯ ಕಾರ್ಯನಿರ್ವಹಣಾ
ಅಧಿಕಾರಿ ಸುದರ್ಶನ್ ಬಂಡಾರಿ, ಶಾಖ ಮುಖ್ಯಸ್ಥರಾದ ರಾಜಾರಾಮ ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: