April 25, 2024

Bhavana Tv

Its Your Channel

ಜಿ.ಎಸ್.ಬಿ.ಮಹಿಳಾ ವಿಭಾಗ ಕಾರ್ಕಳದ ವತಿಯಿಂದ ಶ್ರಾವಣಮಾಸದ ವರಮಹಾಲಕ್ಷ್ಮಿ ಪೂಜೆಯು ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕಾರ್ಕಳ ; ಆಗಸ್ಟ್ ೧೨ ನೇ ತಾರೀಖು ಶುಕ್ರವಾರ ವೇದಮೂರ್ತಿ ಗುರು ತಂತ್ರಿ ,ಸುಮಂತ್ ಜೋಶಿ ಯವರ ನೇತ್ರತ್ವದಲ್ಲಿ ಪೂಜಾ ವಿಧಾನ ನೆರವೇರಿತು. ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಡಿ ಪೈ ಮಾತನಾಡಿ ಕಳೆದ ೩೫ ವರ್ಷಗಳಿಂದ ಜಿ.ಎಸ್.ಬಿ.ಮಹಿಳಾ ವಿಭಾಗ ಕಾರ್ಕಳದ ವತಿಯಿಂದ ಶ್ರಾವಣ ಪೂಜೆಯನ್ನು ನೆರವೇರಿಸಿಕೊಂಡು ಬರುತ್ತಿದ್ದೇವೆ ಎಂದರು, ಈ ಸಂದರ್ಬದಲ್ಲಿ ಅಧ್ಯಕ್ಷೆ ದಿವ್ಯಾ ಡಿ ಪೈ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ದೇವಿಗೆ ಕುಂಕುಮಾರ್ಚನೆಯನ್ನು ನೆರವೇರಿಸಿದರು. ಉಪಾಧ್ಯಕ್ಷೆ ಶ್ವೇತಾ ಶೆಣೈ, ಕೋಶಾಧಿಕಾರಿ ಮಮತಾ ಶೆಣೈ, ಕಾರ್ಯದರ್ಶಿ ರಾಧಿಕಾ ಶೆಣೈ, ಸಹ ಕಾರ್ಯದರ್ಶಿ ವಾರಿಜಾ ವಿ ಕಾಮತ್, ಪದಾಧಿಕಾರಿಗಳಾದ ವಸುಂಧರಾ ಕಾಮತ್, ರಾಖಿ ಭಟ್, ರಶ್ಮಿ ಭಟ್, ಲಲಿತಾ ಭಟ್, ಪ್ರಜ್ಞಾ ಪೈ, ಸಂಧ್ಯಾ ಕಾಮತ್ ರೇಶ್ಮಾ ಶೆಣೈ ಉಪಸ್ಥಿತರಿದ್ದರು.

ವರದಿ ; ಅರುಣ ಭಟ್ ಕಾರ್ಕಳ

error: