April 20, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ ಅತ್ತೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮನ್ಮ ಹಾರ ರಥೋತ್ಸವ

ಕಾರ್ಕಳ:- ನಿಟ್ಟೆ ಗ್ರಾಮದ ಅತ್ತೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮನ್ಮ ಹಾರ ರಥೋತ್ಸವ ದಿನಾಂಕ 14/03/2023 ರಿಂದ 17/03/2023 ರ ತನಕ ವಿವಿಧ ಧಾರ್ಮಿಕ ವಿಧಿವಿಧಾನ,ಬಲಿ ಉತ್ಸವ ಕಟ್ಟೆ ಪೂಜೆ ,ಹಾಗೂ ಮುಂಡಿಲತಾಯಿ ದೈವಗಳ ನೇಮೋತ್ಸವ ಅನ್ನ ಸಂತರ್ಪಣೆ ವಿಜೃಂಭಣೆಯಿAದ ನಡೆಯಿತು.

ಧಾರ್ಮಿಕ ವಿಧಿ ವಿಧಾನಗಳು ಎ. ಶ್ರೀನಿವಾಸ ಆಚಾರ್ಯ ಪ್ರಧಾನ ಅರ್ಚಕರು ,ಹಾಗೂ ಇನ್ನಿತರ ಅರ್ಚಕರು , ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿಯ ಮನ್ಮತ ಜೆ.ಶೆಟ್ಟಿ,ಹಾಗೂ ಸಮಿತಿಯ ಸದಸ್ಯರು ಊರ ಪರ ಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.ದಿನಾಂಕ 17/03/2023ರಂದು ರಾತ್ರಿ ದೇವರ ಬಲಿ ಉತ್ಸವ, ಕಟ್ಟೆ ಪೂಜೆ ದೈವಗಳ ಗಗ್ಗರ ಸೇವೆ,ದೇವರು ಜಲಕಕ್ಕೆ ಹೋಗಿ ಜಲಕದ ನಂತರ ಮುಂಡಿಲತಾಯಿ ದೈವಗಳ ತೂಟೆ ದಾರ ದಲ್ಲಿ ಬರುವ ದೃಶ್ಯ ಕಣ್ಮನ ಸೆಳೆಯುವಂತಿದೆ. ಸುಮಾರು ಅನಾದಿಕಾಲದಿಂದ ನಡೆದು ಬಂದ ಪದ್ಧತಿ ಇದಾಗಿದೆ.

ವರದಿ: ಅರುಣ ಭಟ್ ಕಾರ್ಕಳ

error: