March 27, 2024

Bhavana Tv

Its Your Channel

ಕುಂದಾಪುರ ತಾಲೂಕ ಸಮಿತಿಯಿಂದ ಶತಮಾನೋತ್ಸವ ಸಂಭ್ರಮ ಆಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಕುಂದಾಪುರ :ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ( ರಿ) ಬೆಂಗಳೂರು ಕುಂದಾಪುರದ ತಾಲೂಕು ಸಮಿತಿಯು ಆಯೋಜಿಸಿದ್ದ ಶತಮಾನೋತ್ಸವ ವರ್ಷದ ಸಂಭ್ರಮ – ಸಮಾರಂಭ ( 1922 – 2022 ) ಯಶಸ್ವಿಯಾಗಿ ನೆರವೇರಿತು.
ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷರಾದ ಶೇಖರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರೇಶ, ಮಾಜಿ ಉಪಾಧ್ಯಕ್ಷರಾದ ಸಿ. ರಮೇಶ. ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ವಿಜಯಕುಮಾರ.ಬಿ, ಉಡುಪಿ ಜಿಲ್ಲಾಧ್ಯಕ್ಷರಾದ ನಾಗರಾಜ ರಾವ, ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭಾಕರ ರಾವ, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಕಾಂತ ಶೈನೈ, ಉಡುಪಿ ಜಿಲ್ಲಾ ಕಾರ್ಯದರ್ಶಿ ಅಲ್ಪನ್ಸ್ ಆಲ್ವಾ, ಕುಂದಾಪುರ ಮೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ ರಾಕೇಶ್ ಬಿ. ಕೋಟೇಶ್ವರ ಉದ್ಯಮಿ ಅಶೋಕ ಬೆಟ್ಟಿನ, ಕೆ.ಎಸ್.ಎಲ್.ಇ.ಸಿ.ಎ, ನ್ಯೂಸ್ ನ ಛೇರ್ಮನ್ ವೇಣುಗೋಪಾಲ ಮದ್ಗುಣಿ, ಕುಂದಾಪುರ ಸಮಿತಿಯ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಅಜ್ರಿ, ಚಂದ್ರ ಪೂಜಾರಿ, ಸಂಘದ ಕಾರ್ಯದರ್ಶಿ ವಿಜಯಕುಮಾರ ಗೋವಿಂದ ಮತ್ತು ಖಚಾಂಚಿ ರಾಮಕೃಷ್ಣ ಆಚಾರ್ಯ ರ ಉಪಸ್ಥಿತಿಯಲ್ಲಿ ನೆರವೇರಿತು.
ನಿಟ್ಟೆ ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ ವಿನಾಯಕ. ಕೆ. ಕಾಮತ, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರು ಟಿ ಅಯ್ ಡಿಮೆಲ್ಲೊ, ಅಂತರ ರಾಷ್ಟ್ರೀಯ ಕ್ರೀಡಾಪಟು ನಾಗಶ್ರೀ ಗಣೇಶ ಸೇರುಗಾರ, ನಿವೃತ್ತ ಅಂಚೆಪೇದೆ ಅಣಪ್ಪ ದೇವಾಡಿಗ, ಮತ್ತು ಮೆಸ್ಕಾಂ ಮೆಕಾನಿಕ್ ಅರುಣ ಬಿಲ್ಲವ ಇವರನ್ನು ಸನ್ಮಾನಿಸಲಾಯಿತು.
ಶತಮಾನೋತ್ಸವ ವರ್ಷದ ಸಂಭ್ರಮ ಸಮಾರಂಭದ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
2021 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗುತ್ತಿಗೆದಾರರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಸನ್ಮಾನಿಸಲಾಯಿತು

error: