April 26, 2024

Bhavana Tv

Its Your Channel

ಹೊನ್ನಾವರ ತಾಲೂಕಾ ಪಂಚಾಯತ ಸಾಮನ್ಯ ಸಭೆ

ಹೊನ್ನಾವರ ; ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಾನ್ಯ ಆಡಳಿತಾಧಿಕಾರಿಗಳಾದ ವಿನೋದ ವಿ. ಅಣ್ವೇಕರರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು.

ಸಭೆಯಲ್ಲಿ ತಾಲೂಕಿನ ಅನುಷ್ಠಾನ ಇಲಾಖೆಗಳ ಲಿಂಕ್ ಡಾಕ್ಯೂಮೆಂಟ್ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು. ಸಂಬAಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲೂಕಿನಲ್ಲಿ ಕೈಗೊಂಡ ಕೋವಿಡ್-೧೯ ತಡೆಗಟ್ಟುವ ಕ್ರಮಗಳು, ಪ್ರಸಕ್ತ ಸಾಲಿನ ನೆರೆ ನಿರ್ವಹಣೆ ಕುರಿತು, ದಿವ್ಯಾಂಗರಿಗೆ ಹಾಗೂ ಆದ್ಯತಾ ವಲಯಗಳಿಗೆ ನೀಡಲಾದ ಕೋವಿಡ್-೧೯ ಚುಚ್ಚುಮದ್ದು ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಷ್ಣುವರ್ಧನ ರೆಡ್ಡಿ ಟಿ.ಎಸ್.(ಕ.ಆ.ಸೇ)ರವರು ಹಾಜರಿದ್ದರು.

error: