ಕುಮಟಾ ; ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ|| ಅಶೋಕ ಭಟ್ ಹಳಕಾರರವರು ಚಾಲನೆ ನೀಡಿದರು.
ಉಪಾಧ್ಯಕ್ಷರಾದ ವಿ. ಆಯ್ ಹೆಗಡೆ, ಕಾರ್ಯದರ್ಶಿ ಡಾ|| ಪ್ರೀತಿ ಭಂಡರ್ಕರ್, ಕೋಶಾಧಿಕಾರಿ ಬೀರಣ್ಣ ನಾಯಕ ಬ್ರಾö್ಯಂಚ್ ಮೆನೆಜರ್ ಶ್ರೀಮತಿ ಸಂತಾನ್ ಲೂಯಿಸ್ ಹಾಗೂ ಸಿಬ್ಬಂದಿ ವರ್ಗದವರು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಪ್ರೋತ್ಸಾಹಿಸಿದರು.
ಕಾರ್ಯದರ್ಶಿ ಡಾ|| ಪ್ರೀತಿ ಭಂಡರ್ಕರ್ರವರು ವನಮಹೋತ್ಸವ ಹಾಗೂ ಕೃಷಿಕರ ದಿನಾಚರಣೆಯ ಶುಭಾಷಯ ತಿಳಿಸುವದರೊಂದಿಗೆ ಪರಿಸರ ಸಂರಕ್ಷಣೆಯ ಅವಶ್ಯಕತೆಯ ಕುರಿತು ಮಾತನಾಡಿದರು.
ಅಧ್ಯಕ್ಷರಾದ ಡಾ|| ಅಶೋಕ ಭಟ್ ಹಳಕಾರರವರು ಪರಿಸರದ ವೈಪರಿತ್ಯವನ್ನು ತಡೆಯಲು ಕಾಡು ಬೆಳೆಸಿ ನಾಡು ಉಳಿಸಿ ಹಾಗೂ ಪರಿಸರರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ