April 24, 2024

Bhavana Tv

Its Your Channel

ನೀರಾವರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿ, ಸಾರ್ವಜನಿಕರ ಆಕ್ರೋಶ

ಮುಂಡಗೋಡ: ಇಲ್ಲಿನ ಚಿಕ್ಕ ನೀರಾವರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದ ಯಲ್ಲಾಪುರ ರಸ್ತೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನೀರು ತುಂಬಿ ಪಾದಾಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕ ನೀರಾವಾರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ನಡುವೆ ಸಮನ್ವಯ ಇಲ್ಲದ್ದರಿಂದ ಕಳೆದ ಒಂದು ವರ್ಷದಿಂದ ಸವಾರರು ಮತ್ತು ಜನರು ಪರದಾಡುವಂತಾಗಿದೆ.
ಮುAಡಗೋಡ ಪಟ್ಟಣದ ಯಲ್ಲಾಪುರ ಮುಖ್ಯ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಕಳೆದ ವರ್ಷ ಇಲ್ಲಿನ ಸಣ್ಣ ನೀರಾವರಿ ಇಲಾಖೆ ಅಮ್ಮಾಜಿ ಕೆರೆಯಿಂದ ಹೆಚ್ಚುವರಿ ನೀರು ಹರಿದು ಹೋಗಲು ಅವೈಜ್ಞಾನಿಕವಾಗಿ ಕಂದಕ ತೋಡಿದ್ದರು. ಆದರೆ ಇದರಿಂದ ಆ ಭಾಗದ ರೈತರು ತಮ್ಮ ಗದ್ದೆಗಳಿಗೆ ಮಳೆ ನೀರು ಹರಿದು ಬೆಳೆ ಹಾನಿಯಾಗುತ್ತದೆ ಕೊಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ:-: ವೇಣುಗೋಪಾಲ ಮದ್ಗುಣಿ.

error: