March 29, 2024

Bhavana Tv

Its Your Channel

‘ಹಣತೆ’ ಮುಂಡಗೊಡ ತಾಲೂಕು ಸಮಿತಿ ಅಸ್ತಿತ್ವಕ್ಕೆ

ಮುಂಡಗೋಡ: ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಇದರ ಮುಂಡಗೋಡ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ಸಮಿತಿಯ ಯಾದಿಯನ್ನು ತಾಲೂಕಾಧ್ಯಕ್ಷ ವಿನಯ ನಾಗೇಶ ಪಾಲನಕರ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಹಣತೆ ಮುಂಡಗೋಡ ಘಟಕದ ಅಧ್ಯಕ್ಷರಾಗಿ ವಿನಯ ನಾಗೇಶ ಪಾಲನಕರ, ಗೌರವ ಕಾರ್ಯದರ್ಶಿಗಳಾಗಿ ಸಂತೋಷ ಕುಸನೂರ, ಉಮಾ ಅಭಿನವ, ಗೌರವ ಕೋಶಾಧ್ಯಕ್ಷರಾಗಿ ರಾಧಾಕೃಷ್ಣ ಎನ್. ರೇವಣಕರ ನೇಮಕ ಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆದರ್ಶ ಕುಲಿಗೋಡ, ದರ್ಶನ ಹಂಚಿನಮನಿ, ರಾಘವೇಂದ್ರ ಬೊಯಿಟೆ, ನಾರಾಯಣ ಬಡಿಗೇರ, ಸಚಿನಕುಮಾರ ಮಾದರ, ಮಾರುತಿ ಬೆಂಡ್ಲಗಟ್ಟಿ, ಪ್ರತಿಭಾ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.
ಗೌರವ ಸಲಹೆಗಾರರಾಗಿ ದಯಾನಂದ ನಾಯ್ಕ, ಬಾಲಚಂದ್ರ ಹೆಗಡೆ, ಸುಭಾಷ್ ಡೋರಿ, ಎಸ್.ಜಿ.ಹೂಗಾರ, ನಾಗರಾಜ ನರೇರ, ಈರೇಶ, ರಮಾಬಾಯಿ ಕುದಳೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ವಿನಯ ಪಾಲನಕರ ಅವರ ಅಧ್ಯಕ್ಷತೆಯಲ್ಲಿ ‘ಹಣತೆ’ ಮುಂಡಗೋಡ ತಾಲೂಕು ಕಾರ್ಯಕಾರಿ ಸಮಿತಿ ರಚನಾ ಸಭೆ ನಡೆಯಿತು.

error: