April 26, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್ .ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿದ ಸರಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯಾಧ್ಯಕ್ಷರಾದ ಸಿ .ಎಸ್. ಷಡಕ್ಷರಿ ಯವರು ರಾಜ್ಯ ಸರ್ಕಾರಿ ನೌಕರರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ ಎಂದು ತಾಲೂಕು ಶಾಖೆಯ ಅಧ್ಯಕ್ಷರಾದ ರಾಜಕುಮಾರ ಟಿ.ನಾಯ್ಕ ತಿಳಿಸಿದ್ದಾರೆ
.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಕ್ಕಳ ತಂದೆ ,ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ರಾಜ್ಯ ಸರ್ಕಾರದ ಖಾಯಂ ನೌಕರರಾಗಿರಬೇಕು ಈ ಬಗ್ಗೆ ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿ ತಾಲೂಕ ಶಾಖೆ ಅಧ್ಯಕ್ಷರು ಸೇವಾ ದೃಢೀಕರಣ ಪ್ರಮಾಣದ ಪತ್ರದ ನಮೂನೆಯಲ್ಲಿ ದೃಢೀಕರಣ ನೀಡಬೇಕು. ತಾಲೂಕು ಶಾಖೆಯ ಅಧ್ಯಕ್ಷರ ದೃಢೀಕರಣ ಪತ್ರವಿಲ್ಲದೆ ಆನ್ಲೈನ್ ಮೂಲಕ ಸಲ್ಲಿಸಲ್ಪಡುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು. .
ಆನ್ಲೈನ್ ಅರ್ಜಿಯನ್ನು ವೆಬ್ ಸೈಟ್ https://bit.ly/ksgeaprathibapuraskara2022 ಗೆ ಕಳಿಸಲು ಕೋರಿದರು. ಅರ್ಜಿ ಸಲ್ಲಿಸಲು ದಿನಾಂಕ 15.07.2022 ಅಂತಿಮ ದಿನಾಂಕವಾಗಿದ್ದು ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಮುಕ್ರಿ, ರಾಜ್ಯ ಪರಿಷತ್ ಸದಸ್ಯರಾದ ಎಂ.ಜಿ.ನಾಯ್ಕ, ಉಪಾಧ್ಯಕ್ಷರಾದ ಚಂದ್ರಶೇಖರ್ ಕಳಸ್ ಮತ್ತು ಜಗದೀಶ್ ನಾಯ್ಕ ಹಾಗೂ ಖಜಾಂಚಿಗಳಾದ ದೇವರಾಜ್ ಕರ್ಕಿ ಉಪಸ್ಥಿತರಿದ್ದರು.

error: