March 29, 2024

Bhavana Tv

Its Your Channel

ಉಚಿತ ಕಣ್ಣಿನ ಪೊರೆ ತಪಾಸಣೆ – ಶಸ್ತ್ರ ಚಿಕಿತ್ಸೆ ಶಿಬಿರ

ವರದಿ: ವೇಣುಗೋಪಾಲ ಮದ್ಗುಣಿ

ಮುಂಡಗೋಡ : ಪ್ರಶಾಂತ ದೇಶಪಾಂಡೆ, ಕೆಪಿಸಿಸಿ ಸದಸ್ಯರು ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ದಾಸನಕೊಪ್ಪದಲ್ಲಿ ದೇಶಪಾಂಡೆ ರುಡ್ ಸೇಟ್ ವತಿಯಿಂದ ಹಮ್ಮಿಕೊಂಡಿರುವ ಉಚಿತ ಕಣ್ಣಿನ ಪೊರೆ ತಪಾಸಣೆ/ ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಳಗಿಯಲ್ಲಿ 30 ದಿನಗಳ ಕಾಲ ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳ ಸಮಾರೋಪ ಸಮಾರಂಭ ಕಾರ್ಯಕ್ರದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು. ಮೃತಪಟ್ಟ ಪಾಳಾ ಪಂಚಾಯತ್ ಸದಸ್ಯೆಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಳೆಯಿಂದ ಹಾನಿಯಾದ ನಾಸಿರಖಾನ ಪಠಾಣ, ಶಂಕರಗೌಡ ದಾನಗೌಡ, ಶಮಿರ ಉಲ್ಲಾ ಮುಲ್ಲಾ ಇವರ ಮನೆಗಳಿಗೆ ಭೇಟಿ ನೀಡಿದರು. ಮುಂಡಗೋಡ ಪಟ್ಟಣದಲ್ಲಿ ಹೃದಯಘಾತದಿಂದ ಮೃತಪಟ್ಟ ಖಾಜಾ ಮುದ್ದಿನ್ ಮುಜಾವರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೈಕ್ ಅಪಘಾತದಿಂದ ಗಾಯಗೊಂಡ ಸುದೀರ ಪಾಟೀಲರವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪಾಟೀಲ,ಕಾಂಗ್ರೆಸ್ ಪಕ್ಷದ ಮುಂಖಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: