March 29, 2024

Bhavana Tv

Its Your Channel

ಕಾರವಾರ ವಾರಿಯರ್ಸ್ ಮುಡಿಗೆ ಮೀಡಿಯಾ ಕಪ್, ಭಟ್ಕಳ ಮಿಡಿಯಾ ವಾರಿಯರ್ಸ್ ರನ್ನರ್ಸ್.

ಕಾರವಾರ : ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ ಮೀಡಿಯಾ ಕಪ್ ೨೦೨೧ರ ಚಾಂಪಿಯನ್ ಆಗಿ ಕಾರವಾರ ವಾರಿಯರ್ಸ್ ತಂಡವು ಹೊರಹೊಮ್ಮಿತು. ನಗರದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಭಟ್ಕಳ ಮೀಡಿಯಾ ವಾರಿಯರ್ಸ್ ವಿರುದ್ಧ ಭರ್ಜರಿ ಎಂಟು ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಟ್ಕಳ ತಂಡವು, ೧೦ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೯೨ ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಕಾರವಾರ ವಾರಿಯರ್ಸ್ ತಂಡವು ೭.೩ ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ೯೩ ರನ್ ಗಳಿಸಿ ೨೫ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಆದ ಭಟ್ಕಳ ತಂಡವು ? ೧೫ ಸಾವಿರ ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.

ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ ಕಾರವಾರ ವಾರಿಯರ್ಸ್ನ ಬ್ಯಾಟ್ಸ್ಮ್ಯಾನ್ ಸತೀಶ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯಲ್ಲಿ ಒಟ್ಟು ೧೦೫ ರನ್ ಗಳಿಸಿದ ಭಟ್ಕಳ ಮೀಡಿಯಾ ವಾರಿಯರ್ಸ್ನ ಶಾಹಿದ್ ಉತ್ತಮ ಬ್ಯಾಟ್ಸ್ಮ್ಯಾನ್ ಗೌರವ ಗಳಿಸಿದರು. ಆರು ವಿಕೆಟ್ ಪಡೆದುಕೊಂಡ ನಿತಿನ್ ಉತ್ತಮ ಬೌಲರ್ ಪುರಸ್ಕಾರ ಸ್ವೀಕರಿಸಿದರು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಿತಿನ್ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

error: