ಭಟ್ಕಳ : ಮಾರುತಿ ಬ್ಯಾಲೆನೊ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ವಾಹನ ಸಮೇತ ಭಟ್ಕಳ ಗ್ರಾಮೀಣಾ ಪೊಲೀಸರು ವಶಕ್ಕೆ ಪಡೆದು ಗೋಹತ್ಯ ನಿಷೇಧ ಕಾಯ್ದೆಯಡಿ ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾಲಿ ತಗ್ಗರಗೋಡ ನಿವಾಸಿ ಹಬೀಬುಲ್ಲಾ ಅಹ್ಮದ್ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿ. ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಶುಕ್ರವಾರ ತಡರಾತ್ರಿ ಬೆಣಂದೂರು ಕೋಳಿ ಕೂಗು ದೇವಸ್ಥಾನದ ಬಳಿ ಬೀಟ್ನಲ್ಲಿದ್ದಾಗ ತಪಾಸಣೆಗಾಗಿ ಆರೋಪಿಯ ಕಾರನ್ನು ನಿಲ್ಲಿಸಿದ್ದಾರೆ. ಕಾರನ್ನು ನಿಲ್ಲಿಸದೆ ಪರಾರಿಯಾದ ಆರೋಪಿಯ ಮೇಲೆ ಅನುಮಾನಗೊಂಡ ಪೊಲೀಸರು ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದಾರೆ. ಕಾರನಲ್ಲಿ ಅಕ್ರಮವಾಗಿ ಎತ್ತಿನ ಕರುವನ್ನು ಸಾಗಾಟ ಮಾಡುತ್ತಿರುವದು ಕಂಡು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮೀಣ ಠಾಣಾ ಪಿಎಸ್ಐ ಭರತ ತನಿಖೆ ಕೈಗೊಂಡಿದ್ದಾರೆ, ಈ ಕಾರ್ಯಚರಣೆ ಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ