April 25, 2024

Bhavana Tv

Its Your Channel

ನಾಗಬನದ ಕಂಪೌ0ಡ್ ಕಟ್ಟಿಸಿದ ಶಾಸಕ ಸುನಿಲ್ ನಾಯ್ಕ, ವಿವಾದದ ಕಿಡಿ ಹೊತ್ತಿಸಿದವರ ಬಾಯಿ ಮುಚ್ಚಿಸಿದ ಸುನಿಲ್

ಭಟ್ಕಳ ; ತಾಲೂಕಿನ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ತಂಜೀA ವಿರೋಧದ ನಡುವೆ ನಾಗಬನದ ಕಂಪೌAಡ್ ಕಟ್ಟಿಸಿದ ಶಾಸಕ ಸುನಿಲ್ ನಾಯ್ಕ ರವಿವಾರ ಬೆಳಿಗ್ಗೆ ನಾಗಬನಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದು ಹಿಂದೂ ಸಮಾಜದ ಪ್ರಮುಖರು, ಬಿ.ಜೆ.ಪಿ. ಕಾರ್ಯಕರ್ತರು ಸುನಿಲ್ ನಾಯ್ಕ ಅವರಿಗೆ ಹಾರ ಹಾಕಿ ಅಭಿನಂದಿಸಿದರಲ್ಲದೇ ನಾಗಬನಕ್ಕೆ ಇಲ್ಲಿಯ ತನಕವೂ ವಿವಾದದ ಕಿಡಿ ಹೊತ್ತಿಸಿದವರ ಬಾಯಿ ಮುಚ್ಚಿಸಿರುವುದಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಕಳೆದ ಹಲವಾರು ವರ್ಷಗಳಿಂದ ನಾಗಬನ ಅಭಿವೃದ್ಧಿ ಮಾಡಬೇಕೆಂದು ಹಿಂದೂ ಬಾಂಧವರು ಬಯಸಿದ್ದರೂ ಅದು ಸಾಧ್ಯವಾಗಿಲ್ಲವಾಗಿತ್ತು. ಆದರೆ ಭಟ್ಕಳ ನಗರದ ಶಕ್ತಿಪೀಠದಂತಿರುವ ಈ ನಾಗಬನವನ್ನು ಅಭಿವೃದ್ಧಿ ಮಾಡಲು ಹಲವಾರು ಅಡೆತಡೆಗಳು ಬಂದವು. ಇದೊಂದು ಹಿಂದೂಗಳ ಶೃದ್ಧಾ-ಭಕ್ತಿಯ ಕ್ಷೇತ್ರವಾಗಿದ್ದು ಸಂಪೂರ್ಣ ಹಿಂದೂಗಳಿಗೆ ಸಂಬAಧ ಪಟ್ಟಿದ್ದರೂ ಸಹ ಅಡೆತಡೆಗಳು ಎದುರಾಗುತ್ತಿದ್ದುದು ಅಭಿವೃದ್ಧಿಗೆ ಮಾರಕವಾಗಿತ್ತು. ಆದರೆ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಆವರಣಗೋಡೆಯನ್ನು ನಿರ್ಮಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ನಾಂದಿ ಹಾಡಿದ್ದು ಮುಂದಿನ ದಿನಗಳಲ್ಲಿ ನಿರಾತಂಕವಾಗಿ ಇಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುವುದಕ್ಕೆ ಅನುಕೂಲವಾಗಿದೆ. ಇದಕ್ಕಾಗಿ ಸಮಸ್ತ ಹಿಂದೂ ಬಾಂಧವರನ್ನು ಅಭಿನಂದಿಸುವುದಾಗಿ ಹೇಳಿದ ಅವರು ಯಾವುದೇ ಸಮಯದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದಲ್ಲಿ, ಧಾರ್ಮಿಕ ಭಾವನೆಯನ್ನು ಕೆರಳಿಸಲು ಮುಂದಾದರೆ ಅಂತವರಿಗೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದ ಅವರು ಮುಂದೆಯೂ ಕೂಡಾ ಯಾವುದೇ ಅಡೆತಡೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆಯನ್ನು ನೀಡಿದರು.

error: