April 19, 2024

Bhavana Tv

Its Your Channel

ಮರಡಿಪುರ ಗ್ರಾಮದಲ್ಲಿ ಚಿರತೆ ದಾಳಿಗೆ ಎಮ್ಮೆ ಬಲಿ

ಮಂಡ್ಯ ; ನಾಗಮಂಗಲ ತಾಲ್ಲೂಕು, ಹೊಣಕೆರೆ ಹೋಬಳಿಯ ಮರಡಿಪುರ ಗ್ರಾಮದ ವೆಂಕಟರಮಣಯ್ಯ ರವರಿಗೆ ಸೇರಿದ ಎಮ್ಮೆಯನ್ನು ಚಿರತೆಯು ಹೊತ್ತೊಯ್ದು ಊರಿನ ಹೊರ ಭಾಗದಲ್ಲಿ ತಿಂದಿರುವ ಘಟನೆ ಶನಿವಾರ ರಾತ್ರಿ ಬೆಳಗಿನ ಜಾವ ನಡೆದಿದೆ, ಪದೇ ಪದೇ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಸಾಕು ಪ್ರಾಣಿಗಳಾದ ಆಡು. ನಾಯಿ. ಹಾಗೂ ಜಾನುವಾರುಗಳನ್ನು ತಿಂದ ಹಾಕೂತಿದ್ದು ನಿನ್ನೆಯೂ ಕೂಡ ಒಂದು ಎಮ್ಮೆಯನ್ನು ಹೊತ್ತೋದ್ದು ತಿಂದಿರುವುದು ಮೂರನೇ ಪ್ರಕರಣವಾಗಿದೆ ಎಂದು ಗ್ರಾಮಸ್ಥರು ಭಯಭೀತಗೊಂಡು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ದಿನ ನಿತ್ಯದಂತೆ ಬೆಳಗಿನಜಾವ ಎದ್ದು ಕೊಟ್ಟಿಗೆಯಲ್ಲಿ ನೋಡಿದಾಗ ಎಮ್ಮೆಯು ಕಾಣದೆ ಗ್ರಾಮದ ಅಕ್ಕ ಪಕ್ಕದಲ್ಲಿ ಹುಡುಕಾಡಿದ್ದಾರೆ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಎಮ್ಮೆಯನ್ನು ಚಿರತೆ ಎಳೆದುಕೊಂಡು ಹೋಗಿ ತಿಂದು ಹಾಕಿರುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

error: