April 18, 2024

Bhavana Tv

Its Your Channel

ಶಿಕ್ಷಕ ಶ್ರೀ ಜನಾರ್ದನ ನಾಯ್ಕ ಇಂದು ಬೆಳಿಗ್ಗೆ ನಿಧನ

ಹೊನ್ನಾವರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಸಿನಮೊಟೆ ಇಲ್ಲಿಯ ಕ್ರಿಯಾಶೀಲ ಶಿಕ್ಷಕರು, ಸ್ಕೌಟ್ಸ್ & ಗೈಡ್ಸ್ ಇದರ ತಾಲೂಕಾ ಕಾರ್ಯದರ್ಶಿಗಳು ಆದ ಶ್ರೀ ಜನಾರ್ದನ ನಾಯ್ಕ ಇವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ
ಶ್ರೀ ಜನಾರ್ದನ ನಾಯ್ಕ ಕಳೆದ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸ್ಕೌಟ್ ಗೈಡ್ಸ ವತಿಯಿಂದ ಮಾಸ್ಕ ವಿತರಿಸಿ ಕೋವಿಡ್ ಸಂಕಷ್ಟದ ಸ್ಥಿತಿಯಲ್ಲೂ ಪರೀಕ್ಷೆ ಸಫಲತೆ ಗೊಳ್ಳಲು ಕಾರಣಿಕರ್ತರಾಗಿದ್ದರು, ಉತ್ತಮ ಸಂಘಟನೆ ಹಾಗೂ ಸಹಕಾರದ ಮೂಲಕ ತಾಲೂಕಿನ ಸ್ಕೌಟ್ಸ್ ಗೈಡ್ಸ ಚಟುವಟಿಕೆಗಳನ್ನು ಅತ್ಯಂತ ಕಾಳಜಿಯಿಂದ ನಡೆಸಿಕೊಂಡು ಬಂದಿರುವ ಉತ್ತಮ ಶಿಕ್ಷಕರು ಯಾವತ್ತೂ ಲವಲವಿಕೆಯಿಂದ ಇರುವಂತವರು.
ಜನಾರ್ಧನ ನಾಯ್ಕ ಅವರು ಉತ್ತಮ ಸಂಘಟಕರು ಮಾತ್ರವಲ್ಲ ತನ್ನ ತರಗತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಗೆ ಒತ್ತು ನೀಡುತ್ತಿದ್ದರು. ಹೃದಯ ತೊಂದರೆಗೆ ಒಳಗಾಗಿ ಚಿಕಿತ್ಸೆ ಪಡೆದು ಸ್ಟಂಟ್ ಹಾಕಿಸಿಕೊಂಡು ೨ ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಪತ್ನಿ ಹಳೇಮಠ ಕಿ.ಪ್ರಾ. ಶಾಲೆಯ ಸಹಶಿಕ್ಷಕಿ ಸುವರ್ಣಪ್ರಭಾ, ಇಬ್ಬರು ಪುತ್ರಿಯರು, ಓರ್ವ ಪುತ್ರ ಅಪಾರ ಬಂಧು ಬಳಗವನ್ನಲಿದ್ದಾರೆ.

error: