March 29, 2024

Bhavana Tv

Its Your Channel

ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಯಾಗಿ ವೀರೇಂದ್ರ ಬಾಡ್ಕರ ನೇಮಕ

ಭಟ್ಕಳ ತಾಲೂಕು ಪಂಚಾಯಿತಿ ಅಧ್ಯಕ್ಷರ ಅವಧಿ ಮುಗಿದ ಕಾರಣ, ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಯಾಗಿ ವೀರೇಂದ್ರ ಬಾಡ್ಕರ ಅವರನ್ನು ನೇಮಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು ಗುರುವಾರ ಅವರು ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಭಟ್ಕಳದಲ್ಲಿ ತಹಶೀಲ್ದಾರ ಆಗಿದ್ದ ಅವರು ಈಗ ಉತ್ತರಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಟ್ಕಳ ತಾ.ಪಂ ಅವಧಿ ಮೇ.೫ರಂದು ಮುಕ್ತಾಯವಾದ ಹಿನ್ನಲೆ ಆಡಳಿತಕ್ಕೆ ತೊಂದರೆ ಆಗದಂತೆ ಆಡಳಿತ ಅಧಿಕರಿಯನ್ನಾಗಿ ಅವರನ್ನು ನೇಮಿಸಲಾಗಿದೆ. ಈ ಹಿನ್ನಲೆಯಲ್ಲಿ ಗುರುವಾರ ಅವರು ಅಧಿಕಾರ ಸ್ವೀಕರಿಸಿದರು.

error: