ಕುಮಟಾ: ಕರೋನಾ ಭಯವಿಲ್ಲದೆ ಸರ್ಕಾರದ ಮಾರ್ಗಸೂಚಿಗೆ ಕವಡೆ ಕಾಸಿನ್ ಕಿಮ್ಮತ್ತು ನೀಡದೆ ಅನಗತ್ಯವಾಗಿ ಸಂಚಾರ ಮಾಡುತ್ತಿರುವವರನ್ನು ವಿಚಾರಣೆ ನಡೆಸಿ ಕುಮಟಾ ಪೋಲಿಸ್ ಠಾಣೆಯ ಪಿ.ಎಸ್.ಐ ರವಿ ಗುಡ್ಡಿ, ಕ್ರೈ.ಪಿ.ಎಸ್.ಐ ಸುದಾ ಹರಿಕಾಂತ್ರ ಹಾಗೂ ಎ. ಎಸ್.ಐ ನಾಗರಾಜ ನೇತ್ರತ್ವದ ತಂಡ ೩೦ ಬೈಕ್ ಸಿಜ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ,
ಅಲ್ಲದೆ ತೀವ್ರ ಅನಿವಾರ್ಯ ಕಾರಣದ ನಿಮಿತ್ತ ತೆರಳುವವರಿಗೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ,
ರಾಜ್ಯದಲ್ಲಿ ಕರೋನಾ ಕೋವಿಡ್ ಎರಡನೇ ಅಲೇ ವ್ಯಾಪಕವಾಗಿ ಏರುತ್ತಿದ್ದು, ನಿಯಂತ್ರಿಸಲು ಸರಕಾರ ಕೆಲದಿನಗಳ ಕಾಲ ಲಾಕ್ ಡೌನ ಘೋಷಣೆ ಮಾಡಿದೆ, ಆದರೂ ಕುಮಟಾ ಪಟ್ಟಣದಲ್ಲಿ ಕರೋನಾ ಭಯವಿಲ್ಲದೆ ಬೇಕಾ ಬಿಟ್ಟಿಯಾಗಿ ತಿರುಗುತ್ತಿರುವವರನ್ನು ಗಮನಿಸಿದ ಪೋಲಿಸ್ರು ಕುಮಟಾ ಗಿಬ್ ಹೈಸ್ಕೂಲ್ ವೃತ್ತ, ಹೊಸ ಬಸ್ ನಿಲ್ದಾಣದ ಹತ್ತಿರ ಅನಗತ್ಯವಾಗಿ ಸಂಚರಿಸುತ್ತಿರುವರ ಬೈಕ್ ಸಿಜ್ ಮಾಡಿದ್ದಾರೆ.
ಕೆಲವವರು ಆಸ್ಪತ್ರೆಗೆ ತೆರಳಲು , ಔಷಧಿ ತರಲು ಹೊಗುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಅವರನ್ನು ಕೂಡಾ ವಿಚಾರಣೆ ನಡೆಸಿದ್ದಾರೆ, ಬೇಕಾ ಬಿಟ್ಟಿಯಾಗಿ ಓಡಾಡಿದವರ ಬೈಕ್ ಸಿಜ್ ಮಾಡಿದ್ದಾರೆ.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ