March 26, 2024

Bhavana Tv

Its Your Channel

ಕೈಗಡಿಯಲ್ಲಿ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕತೆ , ಚಿಂತನೆ ಕಾರ್ಯಕ್ರಮ

ವರದಿ ; ವೇಣುಗೋಪಾಲ ಮದ್ಗುಣಿ

ಅಂಕೋಲಾ:- ಸರಕಾರದ ರೈತಪರ ಕಾರ್ಯಕ್ರಮಗಳಲ್ಲೊಂದಾದ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ
ಕಾರ್ಯಕ್ರಮವನ್ನು ವಿಶಿಷ್ಟವಾದ ಮತ್ತು ವಿನೂತನವಾದ ರೀತಿಯಲ್ಲಿ ಪಟ್ಟಣ ಪ್ರದೇಶದಿಂದ ಅತೀ ದೂರದಲ್ಲಿರುವ ಅಂಕೋಲಾ ತಾಲೂಕಿನ ಕುಗ್ರಾಮ ಕೈಗಡಿಯಲ್ಲಿ ಸೆ ೧೮ ರಂದು ಶನಿವಾರ ಬೆಳಿಗ್ಗಿನಿಂದ ಸಂಜೆಯವರೆಗೆ ಹಮ್ಮಿಕೊಂಡಿದ್ದು ರೈತರ ಕಷ್ಟ,ಸುಖ, ಬೇಡಿಕೆ, ಧ್ವನಿಯನ್ನು ಸರಕಾರಕ್ಕೆ ತಲುಪಿಸುವ ಕೆಲಸ ಹಾಗೂ ರೈತರ ಕುರಿತಾದ ಚಿಂತನೆ ಈ ಕಾರ್ಯಕ್ರಮದ ಉದ್ದೇಶ ಎಂದು ಸಾವಯುವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ ಅವರು ತಿಳಿಸಿದರು. ಅವರು ಕೈಗಡಿಯಲ್ಲಿ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ದಿನವಿಡಿ ಈ ರೈತರೊಟ್ಟಿಗೆ ಅನ್ನದಂಗಳ ಕಾರ್ಯಕ್ರಮದಲ್ಲಿ ಇರುತ್ತಾರೆ. ಈ ಊರಿನ ವಿಶೇಷ ತಳಿಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಸಾವಯವ ಸೇರಿದಂತೆ ಮಾದರಿ ರೈತರೊಂದಿಗೆ, ವಿವಿಧ ಪರಿವಾರ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕಥೆ ಸಂವಾದ ನಡೆಸಲಿದ್ದಾರೆ. ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿರುವ ಈ ಕಾರ್ಯಕ್ರಮ ನಮ್ಮ ಈ ಊರಿನ ಪಾಲಿಗೆ ಬಂದಿರುವುದು ವಿಶೇಷವಾಗಿದ್ದು ಕಾರ್ಯಕ್ರಮದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ, ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ, ಸಂಸದರು, ಜಿಲ್ಲೆಯ ಶಾಸಕರು, ನಿಗಮದ ಅಧ್ಯಕ್ಷರುಗಳು, ವಿಧಾನಪರಿಷತ ಸದಸ್ಯರು ವಿವಿಧಸ್ಥರದ ಜನಪ್ರತಿನಿಧಿಗಳು, ತೋಟಗಾರಿಕೆ, ಕೃಷಿ ಹಿರಿಯ ಅಧಿಕಾರಿಗಳು ಕೃಷಿ ತೋಟಗಾರಿಕೆ ಕ್ಷೇತ್ರದ ಸಾಧಕರು ಪಾಲ್ಗೊಳ್ಳಲಿದ್ದಾರೆ. ಅಧಿಕಾರಿಗಳ ಜೊತೆ ರೈತರ ಸ್ಥಾನಿಕ ಗ್ರಾಮಸ್ಥರ ಪಾತ್ರ ಬಹು ಮುಖ್ಯವಾದುದು ಎಂದ ಅವರು ಜಿಲ್ಲೆಯ ಸಾಧಕ ರೈತರನ್ನು ಆಹ್ವಾನಿಸಲಾಗಿದೆ.
ಕೃಷಿ,ತೋಟ, ಸಾಂಪ್ರದಾಯಕತೆ, ಬಿತ್ತನೆಬೀಜ,ವಿಶೇಷ ತಳಿ, ನಕ್ಷತ್ರವನ, ನವಗ್ರಹವನ,ಸೇರಿದಂತೆ ಹಲವು ಮಾಹಿತಿಯನ್ನೊಳಗೊಂಡ ಪ್ರದರ್ಶನವನ್ನು ಈ ಕಾರ್ಯಕ್ರಮದಲ್ಲಿ ಜೋಡಿಸಲಾಗುತ್ತದೆ.ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ,ಹಾರ ತುರಾಯಿ ಸನ್ಮಾನಗಳಿರುವುದಿಲ್ಲ. ಸ್ಥಾನಿಕರು, ಸಂಘಟಕರು ಜನರನ್ನು ಆಹ್ವಾನಿಸುತ್ತಾರೆ. ರಸ್ತೆ ಸಂಚಾರ ದುರ್ಗಮ ವ್ಯವಸ್ಥೆಯಾಗಿದ್ದರೂ ಇಂತಹ ಹಳ್ಳಿ ಮೂಲೆಯಲ್ಲೊಂದು ಐತಿಹಾಸಿಕವಾದ ಕಾರ್ಯಕ್ರಮ ಸಂಯೋಜನೆ ನಮ್ಮದಾಗಬೇಕು. ಕಾರ್ಯಕ್ರಮದ ಶ್ರೇಯಸ್ಸಿಗೆ ರೈತರು ರೈತ ಮಹಿಳೆಯರು, ಸ್ಥಾನಿಕ ಪ್ರಮುಖರು, ಸಮಿತಿಯವರು ಇಲಾಖೆಯ ಮುಖ್ಯಸ್ಥರು ಶೃಮಿಸಬೇಕೆಂದರು.ವಿವಿಧ ವ್ಯವಸ್ಥೆತಗಳ ಹೊಣೆಯನ್ನು ಗೊತ್ತುಪಡಿಸಲಾಯಿತು.ಸೇರಿದ್ದ ಗ್ರಾಮಸ್ಥರು ರಸ್ತೆ ವ್ಯವಸ್ಥೆ, ಗುಳ್ಳಾಪುರ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ದೋಣಿ ಇಲ್ಲವೇ ಬೋಟ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಯವರು ಮುತುವರ್ಜಿವಹಿಸಬೇಕೆಂದು ಕೋರಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕಾರವಾರ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಉಪ ಕೃಷಿ ನಿರ್ದೇಶಕ ಶಿವಪ್ರಸಾದ, ಅಂಕೋಲ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ನಾಯ್ಕ, ರಾ.ಸ್ವ.ಸಂಘದ ದತ್ತಾತ್ರಯ ಎಸ್.ಭಟ್ಟ ಶೇವ್ಕಾರ, ಭಾರತೀಯ ಕಿಸಾನ್ ಸಂಘದ ನರಸಿಂಹ ಸಾತೊಡ್ಡಿ, ಪ್ರಮುಖರಾದ ಭಾಸ್ಕರ ಮೋತಿಗುಡ್ಡ,ನಾರಾಯಣ ಹೆಗಡೆ ಕರಿಕಲ, ಭಾಸ್ಕರ ಹಿಲ್ಲೂರ, ನಾರಾಯಣ ಹೊಸ್ಮನೆ,ವೀಶ್ವೇಶ್ವರ ಹೆಬ್ಬಾರ್,ಅಣ್ಣಯ್ಯ ಹೆಗಡೆ,ಲ್ಯಾಂಪ್ಸ್ ಸೊಸೈಟಿಯ ರಾಮನಾಥ ಶಿದ್ದಿ, ಕುಣಬಿ ಸಮಾಜದ ಗಣಪತಿ ಕುಣಬಿ,ವಿ.ಎಸ್.ಭಟ್ಟ ಕಲ್ಲೇಶ್ವರ,ಗೌರೀಶ ವೈದ್ಯ, ವೆಂಕಣ್ಣ ವೈದ್ಯ,ಗೋವಿಂದ ಹೆಗಡೆ ಅಚವೆ ಸಲಹೆ ಸೂಚನೆ ನೀಡಿದರು. ದತ್ತಾತ್ರಯ ಹೆಗಡೆ ಕೈಗಡಿ ಸ್ವಾಗತಿಸಿ ನಿರ್ವಹಿಸಿದರು. ರೈತರೊಟ್ಟಿಗೆ ಅನ್ನದಂಗಳದಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಸಾವಯುವ ಕೃಷಿ ಮಿಷನ್ ಅಧ್ಯಕ್ಷ ಆನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

error: