April 20, 2024

Bhavana Tv

Its Your Channel

ವಿದ್ಯಾರ್ಥಿಗಳ ಜೀವನದಲ್ಲಿ ಪಾಲಕರ ಪಾತ್ರ ಮುಖ್ಯ – ಡಿ.ಎಲ್. ಭಟ್ಕಳ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ: ಕೆಎಲ್ ಇ ಎಸ್ ಪದವಿ ಪೂರ್ವ ವಿದ್ಯಾಲಯ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಉಪನ್ಯಾಸಕಿ ಜಯಾ ಗಾಂವಕರ ಸ್ವಾಗತ ಭಾಷಣದೊಂದಿಗೆ ವರದಿ ವಾಚಿಸಿದರು. ಕೆಎಲ್ ಇ ಎಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಡಿ.ಎಲ್. ಭಟ್ಕಳ ಅಧ್ಯಕ್ಷ ಸ್ಥಾನವನ್ನು ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಪಾತ್ರ ಮಹತ್ವವಾದದ್ದು, ಇಂದಿನ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಕಲಿಯಬೇಕು ಎಂದು ಹೇಳಿದರು. ವಿದ್ಯಾರ್ಥಿಯ ಪಾಲಕರಾದ ನಿಶಾ ಶೆಟ್ಟಿ ಅವರು ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಸ್ಮಿತಾ ಪಾತರಫೇಕರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಯಗಳನಾಡಿದರು.ಉಪನ್ಯಾಸಕರಾದ ಧರ್ಮೇಶ್ ಬಲೆಗಾರ ಮತ್ತು ಸಂತೋಷ ಬಂಟ ವಿದ್ಯಾರ್ಥಿಗಳನ್ನು ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉಪನ್ಯಾಸಕರಾದ ಶ್ರೀಧರ ಬಂಟ ವಂದನಾರ್ಪಣೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ಕು. ರಜನಿ ಗೌಡ ನೆರವೇರಿಸಿದರು

error: