ಭಟ್ಕಳ: ಕೇಲವು ದಿನಗಳ ಹಿಂದೆ ಸಾಗರನಲ್ಲಿ ಕೋವಿಡ್ ಸೋಂಕಿಗೊಳಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ವ್ಯಕ್ತಿಯನ್ನ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಬಿಡುಗಡೆ ಗೋಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಗಿಯ ಸಂಬAಧಿಕರು ಕಳೆದ ವಾರ ಸಾಗರನಲ್ಲಿ ಕೋವಿಡ್ ಸೋಂಕಿನಿAದ ಬಳಲುತ್ತಿದ್ದ ನಮ್ಮವರು ತೀವ್ರ ತೊಂದರೆ ಅನುಭವಿಸಿದ್ದರು ಆಂಬುಲೆನ್ಸ್ ಮೂಲಕ ಭಟ್ಕಳಕ್ಕೆ ಬಂದು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದೇವು. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಮಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಇಲ್ಲಿನ ವೈದ್ಯರ ಸೇವೆ, ದಾದಿಯರ ಹಾಗೂ ಇತರೇ ಸಿಬ್ಬಂದಿಗಳ ಸೇವೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯ ವಾತಾವರಣ ಕೂಡಾ ಅತ್ಯಂತ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ನಿಸಾರ್ ಅಹ್ಮದ್,ಇರ್ಶಾದ್ ಮುಂದಾದರು ಉಪಸ್ಥಿತಿ ಇದ್ದರು.
More Stories
ವಿವಿಧ ಇಲಾಖೆಯ ನೌಕರರಿಗಾಗಿ ಮಣಿಪಾಲ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ
ಭಟ್ಕಳದ ಏಐಟಿಎಮ್ ನಲ್ಲಿ ಕೋಡ್ನೆಸ್ಟ್ ಟೆಕ್ನಾಲಜೀಸ್ನಿಂದ ಕ್ಯಾಂಪಸ್ ಸಂದರ್ಶನ
ಶ್ರೀ ಶೀಗೆ ಹನುಮಂತ ದೇವಸ್ಥಾನ ಇದರ ಪುನರ್ ಪ್ರತಿಷ್ಠಾನೆ ಹಾಗೂ ಬ್ರಹ್ಮಕಲಶೋತ್ಸವ ಮಾರ್ಚ 21 ರಿಂದ 23ರವರೆಗೆ