ಭಟ್ಕಳ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಇಲ್ಲಿನ ಯುತ್ ಕಾಂಗ್ರೆಸ್ ವತಿಯಿಂದ ಶನಿವಾರ ಕೋಕ್ತಿನಗರದಲ್ಲಿರುವ ಸ್ನೇಹ ವಿಶೇಷ ಶಾಲೆಗೆ ಆಹಾರದ ಕಿಟ್ ವಿತರಿಸಲಾಯಿತು.
ಈ ಸಂರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ರಾಹುಲ್ ಗಾಂಧಿಯವರು ಭಾರತದ ಭವಿಷ್ಯದ ಪ್ರಧಾನಿಯಾಗಲಿದ್ದಾರೆ. ಅವರ ಜನ್ಮದಿನದಂದು ಯುತ್ ಕಾಂಗ್ರೆಸ್ನಿಂದ ಸ್ನೇಹ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಆಹಾರ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ, ಹಿರಿಯ ಮುಖಂಡ ಟಿ ಡಿ ನಾಯ್ಕ, ಜಿಲ್ಲಾ ಯುತ್ ಕಾಂಗ್ರೆಸ್ ಪ್ರಧಾನಕರ್ಯರ್ಶಿ ಲಕ್ಷ್ಮಣ ನಾಯ್ಕ ಅಳ್ವೆಕೋಡಿ,ಯುತ್ ಕಾಂಗ್ರೆಸ್ ಮುಖಂಡರಾದ ದರ್ಗದಾಸ ಮೊಗೇರ,ದಯಾನಂದ ಶಿರಾಲಿ,ಸಂತೋಷ ನಾಯ್ಕ ಅಳ್ವೆಕೋಡಿ, ವೆಂಕಟೇಶ ನಾಯ್ಕ,ಮಣಿಕಂಠ ನಾಯ್ಕ ಮುಂತಾದವರಿದ್ದರು.
More Stories
ವಿವಿಧ ಇಲಾಖೆಯ ನೌಕರರಿಗಾಗಿ ಮಣಿಪಾಲ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ
ಭಟ್ಕಳದ ಏಐಟಿಎಮ್ ನಲ್ಲಿ ಕೋಡ್ನೆಸ್ಟ್ ಟೆಕ್ನಾಲಜೀಸ್ನಿಂದ ಕ್ಯಾಂಪಸ್ ಸಂದರ್ಶನ
ಶ್ರೀ ಶೀಗೆ ಹನುಮಂತ ದೇವಸ್ಥಾನ ಇದರ ಪುನರ್ ಪ್ರತಿಷ್ಠಾನೆ ಹಾಗೂ ಬ್ರಹ್ಮಕಲಶೋತ್ಸವ ಮಾರ್ಚ 21 ರಿಂದ 23ರವರೆಗೆ