April 26, 2024

Bhavana Tv

Its Your Channel

ಮಂಗನ ದಾಳಿಗೆ ತುತ್ತಾಗಿ ಗಂಭಿರವಾಗಿ ಗಾಯಗೊಂಡ ಮಹಿಳೆಗೆ ಅರಣ್ಯ ಇಲಾಖೆ ೩೦ಸಾವಿರ ರೂ. ಪರಿಹಾರ

ಭಟ್ಕಳ: ಪಟ್ಟಣದ ವಿ.ಟಿ. ರೋಡ ನಿವಾಸಿ ಸರೋಜಿನಿ ಶೇಟ್ ಜ.೧೯ರಂದು ಜಂಬೂರಮಠದ ಬಳಿ ನಡೆದುಕೊಂಡು ಹೋಗುವಾಗ ಮಂಗವೊAದು ದಾಳಿ ನಡೆಸಿತ್ತು. ರಕ್ತನಾಳಕ್ಕೆ ಹಾನಿಯಾಗಿ ಗಂಭಿರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಈ ಕುರಿತು ಅರಣ್ಯ ಇಲಾಖೆಗೆ ಮನವಿ ನೀಡಲಾಗಿತ್ತು. ಕಾಡು ಪ್ರಾಣಿಗಳ ದಾಳಿ ನಡೆಸಿ ಪ್ರಾಣಕ್ಕೆ ಕುತ್ತು ತರುವ ಪರಿಹಾರದ ಯೋಜನೆ ಅಡಿಯಲ್ಲಿ ೩೦ಸಾವಿರ ರೂಗಳನ್ನು ಫಲಾನುಭವಿ ಮಹಿಳೆಯ ಖಾತೆಗೆ ಜಮಾ ಮಾಡಲಾಗಿದೆ ಎಂದು ಆರ್‌ಎಪ್‌ಒ ಸವಿತಾ ದೇವಾಡಿಗ ಮಾಹಿತಿ ನೀಡಿದ್ದಾರೆ.ಭಟ್ಕಳ: ಮಂಗನ ದಾಳಿಗೆ ತುತ್ತಾಗಿ ಗಂಭಿರವಾಗಿ ಗಾಯಗೊಂಡ ಮಹಿಳೆಗೆ ಅರಣ್ಯ ಇಲಾಖೆ ೩೦ಸಾವಿರ ರೂ. ಪರಿಹಾರ ನೀಡಿದೆ.

error: