ಭಟ್ಕಳ: ಪಟ್ಟಣದ ವಿ.ಟಿ. ರೋಡ ನಿವಾಸಿ ಸರೋಜಿನಿ ಶೇಟ್ ಜ.೧೯ರಂದು ಜಂಬೂರಮಠದ ಬಳಿ ನಡೆದುಕೊಂಡು ಹೋಗುವಾಗ ಮಂಗವೊAದು ದಾಳಿ ನಡೆಸಿತ್ತು. ರಕ್ತನಾಳಕ್ಕೆ ಹಾನಿಯಾಗಿ ಗಂಭಿರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಈ ಕುರಿತು ಅರಣ್ಯ ಇಲಾಖೆಗೆ ಮನವಿ ನೀಡಲಾಗಿತ್ತು. ಕಾಡು ಪ್ರಾಣಿಗಳ ದಾಳಿ ನಡೆಸಿ ಪ್ರಾಣಕ್ಕೆ ಕುತ್ತು ತರುವ ಪರಿಹಾರದ ಯೋಜನೆ ಅಡಿಯಲ್ಲಿ ೩೦ಸಾವಿರ ರೂಗಳನ್ನು ಫಲಾನುಭವಿ ಮಹಿಳೆಯ ಖಾತೆಗೆ ಜಮಾ ಮಾಡಲಾಗಿದೆ ಎಂದು ಆರ್ಎಪ್ಒ ಸವಿತಾ ದೇವಾಡಿಗ ಮಾಹಿತಿ ನೀಡಿದ್ದಾರೆ.ಭಟ್ಕಳ: ಮಂಗನ ದಾಳಿಗೆ ತುತ್ತಾಗಿ ಗಂಭಿರವಾಗಿ ಗಾಯಗೊಂಡ ಮಹಿಳೆಗೆ ಅರಣ್ಯ ಇಲಾಖೆ ೩೦ಸಾವಿರ ರೂ. ಪರಿಹಾರ ನೀಡಿದೆ.
More Stories
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ
ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ