March 29, 2024

Bhavana Tv

Its Your Channel

ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ.

ಭಟ್ಕಳ: ನಗರದ ಹೃದಯಭಾಗದಲ್ಲಿರುವ ಶಂಸುದ್ದೀನ್ ವೃತ್ತದಲ್ಲಿ ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಭಾನುವಾರ ಸಂಜೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆಂಬ್ಯುಲೆನ್ಸ್ ಚಾಲಕ ಹೊನ್ನಾವರದಿಂದ ಮಣಿಪಾಲ್ ಕಡೆ ರೋಗಿಯನ್ನು ಸಾಗಿಸುತ್ತಿದ್ದರು. ಆಟೋ ರಿಕ್ಷಾ ಸಾಗರ ರಸ್ತೆಯಿಂದ ಬಂದರ್ ರಸ್ತೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಇಲ್ಲದೆ ಇರೋದ್ರಿಂದ ಹೆಚ್ಚಿನ ಅಪಾಯವಾಗಿಲ್ಲ.

ಅಪಘಾತದ ಪರಿಣಾಮವಾಗಿ ಆಟೋ ರಿಕ್ಷಾ ಪಲ್ಟಿಯಾಗಿ ಬಿದ್ದಿದೆ. ಆಟೋ ಚಾಲಕ ನಾಗರಾಜ್ ತಿಮ್ಮಪ್ಪ ದೇವಾಡಿಗ ತಲೆ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಬ್ಯುಲೆನ್ಸ್ನಲ್ಲಿದ್ದ ರೋಗಿಯೊಬ್ಬರು ಮತ್ತು ಅವರೊಂದಿಗೆ ಬಂದ ಮಹಿಳೆ ಇಬ್ಬರನ್ನೂ ಅಪಘಾತದಲ್ಲಿ ರಕ್ಷಿಸಲಾಗಿದೆ. ಅವರನ್ನು ತಕ್ಷಣ ಭಟ್ಕಳದಿಂದ ಮತ್ತೊಂದು ಆಂಬ್ಯುಲೆನ್ಸ್ ಮೂಲಕ ಮಣಿಪಾಲ್‌ಗೆ ಕಳುಹಿಸಲಾಗಿದೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: