ಭಟ್ಕಳ:ಅಕ್ರಮವಾಗಿ ಇನೋವಾ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುವ ವೇಳೆ ಮುರ್ಡೇಶ್ವರದ ಬಸ್ತಿಯಲ್ಲಿ ವಾಹನ ಸಮೇತ ಜಾನುವಾರನ್ನು ವಶಪಡಿಸಿಕೊಂಡಿದ್ದು ಆರೋಪಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಆರೋಪಿಗಳಾದ ಶಬ್ಬರ ಅಬ್ದುಲ್ ಶೇಖ್, ಬಸ್ಲಿಮಕ್ಕಿ, ಹಾಗೂ ಸಮೀರ್ ಶಂಸುದ್ದೀನ್ ಸಾಬ್ ಮುರ್ಡೇಶ್ವರ ಈ ಇಬ್ಬರು ಸೇರಿ ಇನೋವಾ ವಾಹನ ಸಂಖ್ಯೆ ಕೆ.ಎಲ್೧೪/ಪಿ ೭೯೬೪ ರಲ್ಲಿ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಯಾವುದೇ ದಾಖಲೆ ಇಲ್ಲದೆ ೩ ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಮುರುಡೇಶ್ವರ ಪೋಲಿಸ ಠಾಣೆಯ ವ್ಯಾಪ್ತಿಯ ಬಸ್ತಿಯ ಸಮೀಪ ಪೊಲೀಸರು ವಾಹನ ಅಡ್ಡಗಟ್ಟಿದ ವೇಳೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದು ವಾಹನ ಸಮೇತ ಜಾನುವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಠಾಣೆ ಪಿ.ಎಸೈ ರವೀಂದ್ರ ಬಿರಾದರ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಹವಾಲ್ದಾರ್ ಸುರೇಶ್ ದೇವಡಿಗ್ ತನಿಕೆ ಕೈಗೊಂಡಿದ್ದಾರೆ.
More Stories
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ
ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ