April 23, 2024

Bhavana Tv

Its Your Channel

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮಂಜೂರು ಮಾಡಿರುದಕ್ಕೆ ಮುಖ್ಯಮಂತ್ರಿಗಳಿಗೆ ಮೋಹನ ನಾಯ್ಕ ಅಭಿನಂದನೆ

ಟ್ಕಳ:ರಾಜ್ಯ ಸರ್ಕಾರಿ ನೌಕರರಿಗೆ ಮೂರು ಕಂತುಗಳ ತುಟ್ಟಿಭತ್ಯೆ ಮಂಜೂರುಗೊಳಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ,ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿಯವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಅಧ್ಯಕ್ಷರು ಮೋಹನ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.

ನಂತರ ಮಾತನಾಡಿದ ಅವರು ನಮ್ಮೆಲ್ಲರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘವೆAದರೆ ಅದು ನಮ್ಮ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ KSGEA ದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದಕ್ಕೆ ಜೀವಂತ ಉದಾಹರಣೆ, ಪಾರದರ್ಶಕ ಲೆಕ್ಕಾಚಾರ,ಪ್ರಾಮಾಣಿಕ ಪ್ರಯತ್ನ, ಸ್ವಂತ ಕಟ್ಟಡದ ಆಧುನೀಕರಣ, ಕೆಜಿಐಡಿ ಗಣಕೀಕರಣ,ಕೋವಿಡ್ ಸಂಕಷ್ಟದಲ್ಲೂ ನೌಕರರ ವೇತನ ಕಡಿತವಾಗದಿರುವದು.ನೌಕರರಿಗೆ ನಗದು ರಹಿತ ಚಿಕಿತ್ಸೆಯ ಆರೋಗ್ಯಸಿರಿ ಯೋಜನೆಗೆ ಮುನ್ನುಡಿ,ನೌಕರರಿಗೆ ಹಲವು ರೀತಿಯ ರಜಾ ಸೌಲಭ್ಯಗಳು, ಹೀಗೆ ಹಿಡಿದ ಪ್ರತಿಯೊಂದು ಕೆಲಸದಲ್ಲೂ ಸಾಧನೆಯ ಪ್ರತಿಫಲ ದೊರೆಯುತ್ತಿದೆ ಇದಕ್ಕೆ ಕಾರಣ ನಮ್ಮೆಲ್ಲರ ನೆಚ್ಚಿನ ಯುವ ನಾಯಕರಾದ ಷಡಕ್ಷರಿಯವರ ದಿಟ್ಟ, ಗಟ್ಟಿಯಾದ ನೇತೃತ್ವದ ತಂಡ,ಇವಾಗ ಕೇಂದ್ರದಷ್ಟೇ ೧೧% ಡಿಎ ನೀಡಿ ನೌಕರರಿಗೆ ಗಿಫ್ಟ್ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಪ್ರಸ್ತುತ ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ ಹಿಂದಿನ ಡಿಎಗಳನ್ನು ಲೆಕ್ಕಾಚಾರ ಹಾಕಿದರೆ ಜನೇವರಿ ೨೦೨೦ ರಿಂದ ಜುಲೈ ೨೦೨೧ ರವರೆಗೆ ಮೂರು ಡಿಎಗಳನ್ನು ಪ್ರೀಜ್ ಮಾಡಲಾಗಿತ್ತು. ಈ ಹಿಂದಿನ ಡಿಎ ಎಲ್ಲ ಸೇರಿಸಿ ನೋಡಿದರೆ ೧೧% ಅತ್ಯುತ್ತಮವಾಗಿದೆ. ಇದಕ್ಕೆಲ್ಲಾ ಕಾರಣೀಕರ್ತರಾದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಯಡಿಯೂರಪ್ಪನವರು ಮತ್ತು ಅವರ ಸಂಪುಟಕ್ಕೂ ಹಾಗೂ ಷಡಕ್ಷರಿ ನೇತೃತ್ವದ ತಂಡಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ

error: