ಭಟ್ಕಳ: ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಅಂಗಸAಸ್ಥೆಯಾದ ದೇಶಪಾಂಡೆ ಸ್ಕಿಲ್ಲಿಂಗ್ ಹಾಗೂ ಸಿದ್ಥಾರ್ಥ ಪದವಿ ಕಾಲೇಜಿನ ಸಹಯೋಗದಲ್ಲಿ ಸಿದ್ಥಾರ್ಥ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ಹಾಗೂ ಬಿ.ಕಾಂ ವಿದ್ಯಾರ್ಥಿಗಳಿಗೆ ಉದ್ಯೋಗ ಶಿಬಿರ ನಡೆಸಲಾಯಿತು.
ದೇಶಪಾಂಡೆ ಸ್ಕಿಲ್ಲಿಂಗ್ನ ಸಂಪನ್ಮೂಲ ವ್ಯಕ್ತಿಗಳಾದ ಕು.ರಾಜೇಶ್ವರಿ ಹಾಗೂ ಶ್ರೀನಿವಾಸ್ ಎನ್ ವಿದ್ಯಾರ್ಥಿಗಳಿಗೆ ದೇಶಪಾಂಡೆ ಸ್ಕಿಲ್ಲಿಂಗ್ನ ವಿವಿಧ ಯೋಜನೆಗಳು, ಲಭ್ಯವಿರುವ ಉದ್ಯೋಗ ಅವಕಾಶಗಳು ಹಾಗೂ ಅವುಗಳಿಗೆ ಬೇಕಾಗುವ ಕೌಶಲ್ಯಗಳ ಬಗ್ಗೆ ವಿವರಿಸಿದರು.
ನಂತರ ನಡೆದ ಲಿಖಿತ ಪರೀಕ್ಷೆಯಲ್ಲಿ ಸಿದ್ಥಾರ್ಥ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರರ್ದಶ ನೀಡಿದ್ದು ಬಹಳಷ್ಟು ಉದ್ಯೋಗ ಅವಕಾಶಗಳು ಲಭ್ಯವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಡಿಸಲಾಗಿದೆ. ಈ ಶಿಬಿರದಲ್ಲಿ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.
ಸಿದ್ಥಾರ್ಥ ಪದವಿ ಕಾಲೇಜಿನಲ್ಲಿ ಉದ್ಯೋಗ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಇನ್ನೂ ಮುಂದೆಯು ಸಹ ವಿವಿಧ ಈ ರೀತಿಯ ಉದ್ಯೋಗ ಅವಕಾಶಗಳ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಸಿದ್ಥಾರ್ಥ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಕಾರ್ಯದರ್ಶಿಯಾದ ಅರ್ಚಾನಾ ಯು ಮತ್ತು ಮಹಾವಿದ್ಯಾಲಯದ ಉಪನ್ಯಾಸಕರುಗಳು ಉಪಸ್ಥಿತರಿದ್ದರು.
More Stories
ಮೋದಿಯನ್ನು 3ನೇ ಅವಧಿಗೆ ಪ್ರಧಾನಿಯಾಗಿಸಿ ಎಂದು ಕೆನರಾ ಲೋಕಸಭೆಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ
ಮತದಾನ ಜಾಗೃತಿ ಕಾರ್ಯಕ್ರಮ
ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ ಕಾರ್ಯಾಗಾರ