March 29, 2024

Bhavana Tv

Its Your Channel

ಗುರುಕೃಪಾ ಪತ್ತಿನ ಸಹಕಾರಿ ಸಂಘ ನಿಯಮಿತ ಮುಖ್ಯ ಶಾಖೆ ಮಣ್ಕುಳಿಯ ಸಾಮ್ರಾಟ ಕಟ್ಟಡಕ್ಕೆ ಸ್ಥಳಾಂತರ

ಭಟ್ಕಳ: ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಮಾರುತಿನಗರದಲ್ಲಿ ಕಾರ್ಯನಿರ್ವಹಿಸುತಿದ್ದ ಮುಖ್ಯ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ, ಇನ್ನು ಹೆಚ್ಚಿನ ಸೇವೆ ನೀಡುವ ಉದ್ದೇಶದಿಂದ ಮಣ್ಕುಳಿಯ ಸಾಮ್ರಾಟ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗುರುಕೃಪಾ ಪತ್ತಿನ ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು.

ಅವರು ಶುಕ್ರವಾರ ಮುಖ್ಯ ಶಾಖೆಯನ್ನು ಸ್ಥಳಾಂತರಿಸಿ ಮಾತನಾಡಿದರು. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಶಾಖೆಯೂ ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು ಉತ್ತಮ ಸೇವೆ ನೀಡುತ್ತಿದೆ. ಸ್ಥಳಾಂತರದ ದಿನವೇ ಗ್ರಾಹಕರು ಸುಮಾರು ೬೫ಲಕ್ಷ ಠೇವಣಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕೂಡಲೆ ವಿವಿಧ ಸಾಲ ಸೌಲಭ್ಯ, ಬ್ಯಾಂಕ್ ವಹಿವಾಟು ನಡೆಸಲು ಅನುಕೂಲವಾಗುವಂತೆ ಶಾಖೆಯನ್ನು ನವಿಕರಣಗೊಳಿಸಲಾಗಿದೆ. ಇನ್ನು ಹೆಚ್ಚಿನ, ಉತ್ತಮ ಸೇವೆ ನೀಡುವ ಸಂಕಲ್ಪ ಹೊಂದಲಾಗಿದೆ ಎಂದು ಹೇಳಿದರು. ಅರ್ಬನ ಬ್ಯಾಂಕ್ ಉಪಾಧ್ಯಕ್ಷ ಎಂ. ಆರ್ ನಾಯ್ಕ, ಜಿವಿಎಸ್‌ಎಸ್ ಬೆಳಕೆ ಶಾಖೆಯ ಅಧ್ಯಕ್ಷ ಮಂಜುನಾಥ ನಾಯ್ಕ, ಕರಾವಳಿ ಮಂಜುನಾಥ ನಾಯ್ಕ ಸೇರಿ ಇತರರು ಇದ್ದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾರಾಯಣ ನಾಯ್ಕ, ನಿದೇಶಕರಾದ ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಕುಮಾರ ನಾಯ್ಕ, ಹರೀಶ ನಾಯ್ಕ, ಶಬರೀಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ಭಾರತಿ ನಾಯ್ಕ, ವಿಜಯ ಎಂ. ನಾಯ್ಕ, ಪ್ರಧಾನ ವ್ಯವಸ್ಥಾಪಕ ವಾಸುದೇವ ನಾಯ್ಕ, ಶಾಖಾ ವ್ಯವಸ್ಥಾಪಕ ಮಾದೇವ ನಾಯ್ಕ ಸೇರಿ ಇತರರು ಇದ್ದರು

error: