ಭಟ್ಕಳ :- ಬೀನಾ ವೈದ್ಯ ಇಂಟರ್ ನ್ಯಾಶನಲ್ ಪಬ್ಲೀಕ್ ಸ್ಕೂಲಿನಲ್ಲಿ ಮಕ್ಕಳ ಮತ್ತು ಪಾಲಕರ ಸಮಾಲೋಚನಾ ಸಭೆ ನಡೆಯಿತು. ಸಭೆಯನ್ನು ಪುಷ್ಪಲತಾ ವೈದ್ಯ ಅವರು ಉದ್ಘಾಟಿಸಿದರು.
ಡಾ|| ಹರೀಶ್ ಮೊಗೇರ್, ಸವಿತಾ ಕಾಮತ್ ಮತ್ತು ಶಿಕ್ಷಕ ವೃಂದವು ಉಪಸ್ಥಿತರಿದ್ದರು. ಮಕ್ಕಳಿಗೆ ಎಷ್ಟನ್ನು ಬೋಧಿಸಬೇಕು ಮತ್ತು ಏನನ್ನು ಭೋಧಿಸಬೇಕು ಎನ್ನುವುದನ್ನು ಶ್ರೀಮತಿ ಸವಿತಾ ಕಾಮತ್ ಅವರು ಮಾರ್ಗದರ್ಶನ ಮಾಡಿದರು. ವಿಷಯ ಹೇಗೆ ನಿರ್ವಹಣೆ ಮಾಡುವುದು, ಪಠ್ಯಕ್ರಮ ಒಳನೋಟ ಸೆಳೆಯುವ ವಿಧಾನ, ಕಲಿಕಾ ವಿಷಯ ಮತ್ತು ಅದಕ್ಕೆ ನೀಡಬೇಕಾದ ಸಮಯ ಇದರ ಜೊತೆಗೆ ಏಕಾಗ್ರತೆ, ಒತ್ತಡ ನಿರ್ವಹಣೆ, ಸ್ಥಳೀಯ ಸಂಸ್ಕೃತಿಯ ಅಳಿವು ಉಳಿವಿನ ಬಗ್ಗೆ ಮಕ್ಕಳಿಗೆ ದಿಕ್ಸೂಚಿಯಂತೆ ಮಾರ್ಗದರ್ಶನ ಮಾಡಲಾಯಿತು. ವಿಶೇಷವಾಗಿ ಪರಿಣಿತರಾದ ಡಾ|| ಹರೀಶ್ ಮೊಗೇರ್ ಅವರು ಸಂಪನ್ಮೂಲಗಳ ಏಕೀಕರಣ, ಭಯ, ಅಸೂಹೆ, ನಿರಾಶಕ್ತಿ, ನಡವಳಿಕೆಯಲ್ಲಿ ಬದಲಾವಣೆ, ಹದಿಹರಯದ ಸಮಸ್ಯೆಗಳು, ಸೃಜನಶೀಲತೆ, ಅಪನಂಬಿಕೆ ಇವುಗಳ ಕುರಿತು ಅರಿವನ್ನು ಮೂಡಿಸುವುದರ ಜೊತೆಗೆ ಇದನ್ನು ಹೇಗೆ ಎದುರಿಸಬೇಕು ಎಂದು ಮಾರ್ಗದರ್ಶನ ನೀಡಿದರು.
More Stories
ವಿವಿಧ ಇಲಾಖೆಯ ನೌಕರರಿಗಾಗಿ ಮಣಿಪಾಲ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ
ಭಟ್ಕಳದ ಏಐಟಿಎಮ್ ನಲ್ಲಿ ಕೋಡ್ನೆಸ್ಟ್ ಟೆಕ್ನಾಲಜೀಸ್ನಿಂದ ಕ್ಯಾಂಪಸ್ ಸಂದರ್ಶನ
ಶ್ರೀ ಶೀಗೆ ಹನುಮಂತ ದೇವಸ್ಥಾನ ಇದರ ಪುನರ್ ಪ್ರತಿಷ್ಠಾನೆ ಹಾಗೂ ಬ್ರಹ್ಮಕಲಶೋತ್ಸವ ಮಾರ್ಚ 21 ರಿಂದ 23ರವರೆಗೆ