ಭಟ್ಕಳ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ಭಟ್ಕಳ ತಾಲ್ಲೂಕಿನಲ್ಲಿ 100+ ವರ್ಷ ಪೂರೈಸಿದ 7 ಜನ ಶತಾಯುಷಿ ಮತದಾರರಿಗೆ ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಹಾಗೂ ಮಾನ್ಯ ತಹಶಿಲ್ದಾರರು ಭಟ್ಕಳ ರವರು ಸದರಿ ಹಿರಿಯರಿಗೆ ಸನ್ಮಾನಿಸಿ ಮಾನ್ಯ ಚುನಾವಣಾ ಆಯೋಗದ ಅಭಿನಂದನ ಪತ್ರವನ್ನು ನೀಡಿ ಗೌರವಿಸಲಾಯಿತು.
ಪಡುಶಿರಾಲಿ, ಬೆಂಗ್ರೆ 2 ಯ ದಿವಂಗತ ಭೈರಾ ಗೋವಿಂದ ನಾಯ್ಕ ಭೈರಮಾಸ್ತರಮನೆ ಇವರ ಹೆಂಡತಿ ಕರಿಯಮ್ಮ ಭೈರಾ ನಾಯ್ಕ(ಹುಟ್ಟಿದ್ದ ದಿನಾಂಕ : 10/08/1916) ಇವರ ಮನೆಗೆ ಸಹಾಯಕ ಆಯುಕ್ತರು ಭಟ್ಕಳ ಹಾಗೂ ತಹಶಿಲ್ದಾರರು ಭಟ್ಕಳ ರವರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಶುಭ ಕೋರಿ ಅಭಿನಂಧನಾ ಪತ್ರ ನೀಡಿ ಗೌರವಿಸಿದ್ದರು. ಇವರಿಗೆ 3 ಗಂಡು (ದಿವಂಗoತ ಮಂಜುನಾಥ ಭೈರಾ ನಾಯ್ಕ, ಮಹಾಬಲೇಶ್ವರ ಭೈರಾ ನಾಯ್ಕ, ಜನಾರ್ಧನ ಭೈರಾ ನಾಯ್ಕ) ಮತ್ತು 4 ಹೆಣ್ಣುಮಕ್ಕಳು(ಲಕ್ಷ್ಮಿ ಮಾರುತಿ ನಾಯ್ಕ ಮೋಳಿಮನೆ ಹಿರೇಹಿತ್ಲು, ಮಾದೇವಿ ಅಣ್ಣಪ್ಪ ನಾಯ್ಕ, ಮೋಳಿನಮನೆ ಪಡುಶಿರಾಲಿ, ಬೇಬಿ ಮಂಜುನಾಥ ನಾಯ್ಕ, ಅಳ್ವೆಕೋಡಿ ಬಾಳೆಹಿತ್ಲು, ಶೈಲಾ ಭೈರಾ ನಾಯ್ಕ, ಹೊನ್ನೆಗದ್ದೆ) 22ಮೊಮ್ಮಕ್ಕಳು. ಇವರು ಮಗನಾದ ಮಹಾಬಲೇಶ್ವರ ನಾಯ್ಕ ಇವರ ಜೊತೆಯಲ್ಲಿ ವಾಸವಿದ್ದಾರೆ.
ಇವರಿಗೆ 2015ರಲ್ಲಿ ಎದೆಬಡಿತ ಸಮಸ್ಯೆ ಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಕ್ಕೆ ಫೇಸ್ಮೇಕರ್ ಅಳವಡಿಸಲಾಗಿದೆ.ಇದಾದ ನಂತರ ಇವರ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಮತ್ತು ಆಕ್ಟಿವೇನೆಸ್ಸ್ ಜಾಸ್ತಿ ಆಗಿದೆ. 2020ರಲ್ಲಿ ಲುಂಗ್ಸ್ ಸಮಸ್ಸೆಯಾಗಿ 2 ತಿಂಗಳುಗಳ ಕಾಲ ಖಾಸಗಿ ಆಸ್ಪತ್ರೆ ಯಲ್ಲಿ ಒಳರೋಗಿ ಆಗಿ ಚಿಕಿತ್ಸೆ ಪಡೆದ ನಂತರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಆಗಿದೆ
2022ರ ಜನವರಿ ಅಲ್ಲಿ ಶತಾಯುಷಿ ಸಂಭ್ರಮ ಎಂಬ ಕಾರ್ಯಕ್ರಮ ಮಾಡಿ ಎಲ್ಲಾ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬದವರು, ಸಂಬoಧಿಗಳು, ಹಾಗೂ ಊರಿನವರು ಇವರ ಆಶೀರ್ವಾದ ಪಡೆದುಕೊಂಡೆವು.
More Stories
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ
ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ