ಭಟ್ಕಳ- ಕುಮಾರ ನಾಯ್ಕ ಭಟ್ಕಳರವರ ಪ್ರಧಾನ ಸಂಪಾದಕತ್ವದಲ್ಲಿ ಆರಂಭಗೊAಡಿರುವ ಕನಸಿನ ಭಾರತ ವಾರಪತ್ರಿಕೆ ಕರಾವಳಿ ಕರ್ನಾಟಕದ ನೂತನ ಸಂಚಿಕೆಯನ್ನು ಇಂದು ಭಟ್ಕಳದ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ ಅವರು ತಮ್ಮ ಕಚೇರಿಯಲ್ಲಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅವರು ಮಾತಾನಾಡಿ ಈ ಕನಸಿನ ಭಾರತ ವಾರ ಪತ್ರಿಕೆಯು ಕರಾವಳಿ ಜನತೆಯ ಕನಸನ್ನು ಸಕಾರಗೊಳಿಸಲು ಪ್ರಯತ್ನಿಸಲಿ ಎಂದು ತಿಳಿಸಿದರು. ತಾವು ಸದಾ ಈ ಪತ್ರಿಕೆಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ರಮೇಶ್ ಎಸ್ ಜಿ ಬೆಂಗಳೂರು ಸಂಪಾದಕರು, ಇಬ್ರಾಹಿಂ ಕೋಟ ಕಾರ್ಯನಿರ್ವಾಹಕ ಸಂಪಾದಕರಾಗಿ, ಸೀತಾರಾಮ ಆರ್ ಅಚಾರ್ಯ ಶಿರಸಿ ಜಾಹಿರಾತು ಮುಖ್ಯಸ್ಥರಾಗಿ ಈ ಪತ್ರಿಕೆ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಪ್ರಧಾನ ಸಂಪಾದಕ ಕುಮಾರ ನಾಯ್ಕ ಭಟ್ಕಳ, ಸಾಮಾಜಿಕ ಹೋರಾಟಗಾರ ಅಂಥೋನ್ ಜುಜೆ ಲೂಯಿಸ್ ಮುಂಡಳ್ಳಿ ಉಪಸ್ಥಿತರಿದ್ದರು.
More Stories
ಭಟ್ಕಳದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ
ವಿವಿಧ ಇಲಾಖೆಯ ನೌಕರರಿಗಾಗಿ ಮಣಿಪಾಲ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ
ಭಟ್ಕಳದ ಏಐಟಿಎಮ್ ನಲ್ಲಿ ಕೋಡ್ನೆಸ್ಟ್ ಟೆಕ್ನಾಲಜೀಸ್ನಿಂದ ಕ್ಯಾಂಪಸ್ ಸಂದರ್ಶನ