April 23, 2024

Bhavana Tv

Its Your Channel

ಭಟ್ಕಳದಲ್ಲಿ ಯಶಸ್ವಿಯಾಗಿ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ

ಭಟ್ಕಳದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯು ಮೂಢ ಭಟ್ಕಳ ಬೈಪಾಸ್ ನಿಂದ ಹೊರಟು ಸಂಶುದ್ದೀನ್ ಸರ್ಕಲ್ ವೃತ್ತದ ವರೆಗೆ ರೋಡ್ ಶೋ ನಂತರ ಅಲ್ಲಿಂದ ಶಿರಾಲಿ ವರೆಗೆ ಬೈಕ್ ರ‍್ಯಾಲಿ ಮಾಡುವುದರ ಮೂಲಕ ಯಶಸ್ವಿಯಾಗಿ ನಡೆಯಿತು.

ಮೆರವಣಿಗೆಯ ಮಾರ್ಗ ಮದ್ಯೆ ಸಂಶುದ್ದೀನ್ ಸರ್ಕಲ್‌ನಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ಈ ಕ್ಷೇತ್ರದ ಮೇಲೆ ನನಗೆ ವಿಶ್ವಾಸವಿದೆ ಭಾರತೀಯ ಜನತಾ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ಬಿಜೆಪಿಗೆ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅನುವು ಮಾಡಿಕೊಟ್ಟ ಶಾಸಕರಾದ ಸುನೀಲ್ ನಾಯ್ಕ ರವರ ಅಭಿವೃದ್ಧಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಶಾಸಕ ಸುನೀಲ ನಾಯ್ಕ ಸಾವಿರಾರು ಕೋಟಿಗಳ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ, ಹಲವಾರು ಗ್ರಾಮಗಳ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಿದ್ದಾರೆ, ಬೀದಿ ದೀಪಗಳ ಅಲಂಕಾರ ಮಾಡಿದ್ದಾರೆ ಭಟ್ಕಳ ಹೊನ್ನಾವರದ ಅಭಿವೃದ್ಧಿಯ ತೀರ್ಮಾನ ಮಾಡಿದ್ದಾರೆ ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನAತರ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಸುನಿಲ್ ನಾಯ್ಕ ರವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಆಗಿದ್ದನ್ನು ನೋಡಿ ನಿಮ್ಮ ರಣ ಉತ್ಸಾಹ, ನಿಮ್ಮ ತಾಕತ್ತು, ಶಕ್ತಿ ಈಡಿ ರಾಜ್ಯ ರಾಜಕಾರಣ ಭಟ್ಕಳದತ್ತ ಕಣ್ತೆರೆದು ನೋಡುವಂತೆ ಮಾಡಿದೆ. ಭಾರತ ಜನತಾ ಪಾರ್ಟಿಯನ್ನು ಕಟ್ಟಿದ್ದು ಸಮರ್ಥ್,ಸಮೃದ್ಧ, ಶಕ್ತಿಶಾಲಿ, ಸ್ವಾಭಿಮಾನದ ಭಾರತವನ್ನು ನಿರ್ಮಾಣ ಮಾಡುವ ಸಲುವಾಗಿ. ಅನೇಕ ದೇಶಗಳು ಇಂದಿನ ಭಾರತವನ್ನು ದಿಗ್ಭ್ರಮೆಯಿಂದ ನೋಡುತ್ತಿದೆ ಮುಂದಿನ ದಿನಗಳು ಅಮೆರಿಕದಲ್ಲ ರಸ್ಯದ್ದಲ್ಲ ಬ್ರಿಟನ್ ದಲ್ಲ ಮುಂದಿನ ವಿಶ್ವ ನಾಯಕ ರಷ್ಯಾದ ಪ್ರಧಾನಿ ಅಲ್ಲ ಅಮೆರಿಕದ ಪ್ರಧಾನಿ ಅಲ್ಲ ಬ್ರಿಟನ್ ಪ್ರಧಾನಿ ಅಲ್ಲ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರು

ನಂತರ ಶಾಸಕ ಸುನೀಲ ನಾಯ್ಕ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಕರೋನ ರೋಗದ ಸಮಯದಲ್ಲಿ ಜನರಿಗೆ ಉಚಿತ ವ್ಯಾಕ್ಸಿನ್ ಗಳನ್ನು ನೀಡಿ ಜನರನ್ನು ಮಾರಣಾಂತಿಕ ರೋಗದಿಂದ ರಕ್ಷಿಸಿಸಿರುತ್ತಾರೆ. ಭಟ್ಕಳ ಹೊನ್ನಾವರ ಕ್ಷೆತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ತಾನು ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ 70 ವರ್ಷಗಳ ತಮ್ಮ ಆಡಳಿತದಲ್ಲಿ ಏನನ್ನು ಮಾಡಿರುವುದಿಲ್ಲ ಅಂತಾ ಹೇಳಿದರು.
ಈ ಸಂದರ್ಭದಲ್ಲಿ ಸಾವಿರಾರು ಅಧಿಕ ಬಿಜೆಪಿ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದು 100 ರಿಂದ 150ಕ್ಕೂ ಅಧಿಕ ಆಟೋ ರಿಕ್ಷಾ ಪಾಲ್ಗೊಂಡಿತು.

error: