December 6, 2024

Bhavana Tv

Its Your Channel

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್.ಡಿ. ಹೆಗಡೆ, ಆಲ್ಮನೆ ಆಯ್ಕೆ

ದಾಂಡೇಲಿ: ಶಿರಸಿಯಲ್ಲಿ ಡಿಸೆಂಬರ್ 3 ಮತ್ತು 4 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಆರ್. ಡಿ. ಹೆಗಡೆ, ಆಲ್ಮನೆಯವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಒಮ್ಮತದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸರ್ವಾಧ್ಯಕ್ಷತೆಗೆ ಜಿಲ್ಲೆಯ ಕೆಲವು ಸಾಹಿತಿಗಳ ಹೆಸರುಗಳ ಪ್ರಸ್ತಾವನೆ ಮತ್ತು ಚರ್ಚೆಯ ನಂತರ ಸಭೆಯಲ್ಲಿ ಅಂತಿಮವಾಗಿ ಸರ್ವಾನುಮತದಿಂದ ಆರ್.ಡಿ. ಹೆಗಡೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಘೋಷಿಸಲಾಯಿತು ಎಂದು ಬಿ.ಎನ್. ವಾಸರೆ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್ . ನಾಯ್ಕ, ಜಾರ್ಜ್ ಫರ್ನಾಂಡಿಸ್, ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ, ತಾಲೂಕು ಘಟಕಗಳ ಅಧ್ಯಕ್ಷರಾದ ಸುಬ್ರಾಯ ಭಟ್, ಬಕ್ಕಳ, ಸಿರ್ಸಿ, ವಿ.ಎ. ಕೋಣಸಾಲಿ, ಮುಂಡಗೋಡ, ಸುಬ್ರಹ್ಮಣ್ಯ ಭಟ್, ಯಲ್ಲಾಪುರ, ರಾಮಾ ನಾಯ್ಕ, ಕಾರವಾರ, ಗೋಪಾಲಕೃಷ್ಣ ನಾಯಕ, ಅಂಕೋಲಾ, ಸುಬ್ಬಯ್ಯ ನಾಯ್ಕ, ಕುಮಟಾ, ಎಸ್.ಎಚ್. ಗೌಡ, ಹೊನ್ನಾವರ, ನಾರಾಯಣ ನಾಯ್ಕ, ದಾಂಡೇಲಿ, ಸುಮಂಗಲಾ ಅಂಗಡಿ, ಹಳಿಯಾಳ, ಪಾಂಡುರAಗ ಪಟಗಾರ ಜೋಯಿಡಾ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಮ್. ಮುಕ್ರಿ, ಕುಮಟಾ, ಎಸ್.ಜಿ. ಬಿರಾದರ, ಹಳಿಯಾಳ, ಸೀತಾ ದಾನಗೇರಿ, ಜೋಯಿಡಾ ಉಪಸ್ಥಿತರಿದ್ದರು.

ಆರ್.ಡಿ. ಹೆಗಡೆಯವರ ಪರಿಚಯ :
ಶಿರಸಿ ತಾಲೂಕಿನ ಆಲ್ಮನೆ, ಯವರಾಗಿರುವ ಆರ್.ಡಿ. ಹೆಗಡೆ ( ರಘುನಾಥ ದೇವರು ಹೆಗಡೆ) 75 ವರ್ಷದ ಇಳಿ ಪ್ರಾಯದವರು. ಕನ್ನಡ, ಇಗ್ಲೀಷ್, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ಇವರು ಸಂಸ್ಕೃತ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ,
ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಶಾಸನ ಶಾಸ್ತ್ರದಲ್ಲಿ ಡಿಪ್ಲೋಮಾ ಪದವಿ ಪಡೆದವರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 17 ವರ್ಷ ಉಪನ್ಯಾಸಕರಾಗಿ , 15 ವರ್ಷ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ, 2007ರಲ್ಲಿ ನಿವೃತ್ತಿಯಾಗಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ವಿಶೇಷವಾಗಿ ವಿಮರ್ಷಕರು. ಉತ್ತಮ ವಾಗ್ಮಿಗಳೂ, ವೈಚಾರಿಕ ಚಿಂತಕರೂ ಆಗಿರುವ ಆಲ್ಮನೆಯವರು ತಮ್ಮ ಸಾಹಿತ್ಯ, ವಿಮರ್ಷೆ ಮತ್ತು ಅಂಕಣ ಬರಹಗಳ ಮೂಲಕ ನಾಡಿನ ಗಮನ ಸೆಳೆದವರು. ನೇರ ನಿಷ್ಠುರವಾದಿಗಳಾದರೂ ಸಹೃದಯಿಗಳು. ಇದೀಗ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದಾರೆಂದು ವಾಸರೆ ತಿಳಿಸಿದ್ದಾರೆ.

ಆಲ್ಮನೆಯವರ ಪ್ರಕಟಿತ ಸಾಹಿತ್ಯ:
ಸತ್ಯಮೇವ ಜಯತೆ ಹಾಗೂ ಇತರ ಕಥೆಗಳು, ಪುಟ್ಟ ಗುಲಾಬಿ: (ಕಥಾಸಂಕಲನ), ದಾರಿ (ಕಾದಂಬರಿ), ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ವಿಚಾರ ಸಾಹಿತ್ಯ) ( ನವ ಕರ್ನಾಟಕ ಪ್ರಕಾಶನದಿಂದ ಮೂರು ಬಾರಿ ಮುದ್ರಣ), ಉಪನಿಷತ್ತುಗಳು ಅರ್ಥಲೋಕ: ತತ್ವಶಾಸ್ತ್ರ(ಮೂರು ಬಾರಿ ಮುದ್ರಣ)ಜೆನ್ ಮಹಾಯಾನ: ಬೌದ್ಧ ತತ್ವಶಾಸ್ತ್ರ, ಕೃತಿ ಚಿತ್ತ (ಸಾಹಿತ್ಯ ವಿಮರ್ಶೆ) ಸಂಕಥನ (ಅಂಕಣ ಬರಹ) ಆದಿತ್ಯ ಪ್ರಕಾಶನ ದಿಂದ ಎರಡು ಬಾರಿ ಮುದ್ರಣಗಳು, ಭಾರತದಲ್ಲಿ ಶಿಕ್ಷಣ: ಸವಾಲು ಮತ್ತು ಸಾಧ್ಯತೆ: (Social Scientist ಕೃತಿಯ ಅನುವಾದ) ಮಾನವತ್ವದ ಸಾರ: (George Thomsan £À Human Essence ಕೃತಿಯ ಅನುವಾದ) , ಕಡಲಾಚೆಯ ಕಥೆಗಳು( ವಿಶ್ವಕಥಾಸಾಹಿತ್ಯದಿಂದ ಆಯ್ದ ಕಥೆಗಳ ಅನುವಾದ), ತುಂಬಿದ ಬಟ್ಟಲು ಹಾಗೂ ಇತರ ಬರಹಗಳು( ಸಾಹಿತ್ಯ ಪ್ರಬಂಧಗಳು)ಸೆಕೆ0ಡ್ ಜನರೇಶನ್ (ಕಥಾ ಪ್ರಬಂಧಗಳು) ಕವಿ ವಿ.ಜಿ.ಭಟ್ಟ (ವ್ಯಕ್ತಿ ಮತ್ತು ಸಾಹಿತ್ಯ), ಪೂರ್ಣಚಂದ್ರ ತೇಜಸ್ವಿ: (ವ್ಯಕ್ತಿ ಮತ್ತು ಸಾಹಿತ್ಯ), ಅಲೆಮಾರಿಯ ಸ್ವಗತಗಳು, ಮನೋವ್ಯಾಪಾರದ ಬಿಂಬಗಳು ( ಅಚ್ಚಿನಲ್ಲಿದೆ),The Infidel And Other Essays In Indian Philosophy: (ಗೀರ್ವಾಣ ಸುಧಾ ಮುಂಬಯಿ ಪ್ರಕಟಣೆ, ) ಭಾಸನಾಟಕ ಕಥಾಃ: ಸಂಸ್ಕೃತದಲ್ಲಿ ( ಗೀರ್ವಾಣಸುಧಾ ) ರಾಮಾಯಣ ಸುಭಾಷಿತಾನಿ: (ಸಂಸ್ಕೃತದಲ್ಲಿ), ಅಂಕಣ ಬರಹಗಳು:
(ಲಂಕೇಶ್ ಮತ್ತು ವಿವಿಧ ಪತ್ರಿಕೆಗಳಲ್ಲಿ ಬಂದ ಅಂಕಣ ಬರಹಗಳ ಸಂಗ್ರಹ) ಸೇರಿಂದAತೆ 20 ಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. ಜೊತೆಗೆ ವಿವಿಧ ಪತ್ರಿಕೆಗಳಲ್ಲಿ ಬಿಡಿ ಬರಹಗಳು, ಸಾಹಿತ್ಯ ಪರಾಮರ್ಶೆ ಮತ್ತು ಕಥೆಗಳು ಪ್ರಕಟಗೊಂಡಿವೆ.

ಇ0ಗ್ಲಿಷ್ ನಲ್ಲಿ: The Mysore Orientalist ಹಾಗೂAnnals of Bhandarkar’s Research  Institute ಪುಣೆ ಗಳಲ್ಲಿ ಸಂಶೋಧನೆ 30ರಷ್ಟು ಸಂಶೋಧನ ಪ್ರಬಂಧಗಳು ಪ್ರಕಟಗೊಂಡಿವೆ.

ಆಲ್ಮನೆಯವರಿಗೆ ಸಂದ ಗೌರವಗಳು :
2013ರಲ್ಲಿ ಶಿರಸಿ ತಾಲೂಕಾ ಕನ್ನಡಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಸಭೆಯ ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ಕದಂಬೋತ್ಸವಗಳಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿಯ ಅಧ್ಯಕ್ಷತೆ, ಬಿ.ಎಚ್.ಶ್ರೀಧರ ಪುಸ್ತಕ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಗುಲ್ಬರ್ಗಾದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ರಾಜ್ಯೋತ್ಸವದ ಸಂದರ್ಭದಲ್ಲಿ ತಾಲೂಕಾ ಆಡಳಿತದಿಂದ ಸನ್ಮಾನಗಳು ಇವರಿಗೆ ದೊರೆತಿವೆ.1973 ರಿಂದ ಧಾರವಾಡ, ಸಾಗರ, ಮಂಗಳೂರು, ಮೈಸೂರು ಹಾಗೂ ಸಿರ್ಸಿ ಯಲ್ಲಿ ಕನ್ನಡಸಾಹಿತ್ಯ ಪರಿಷತ್ತಿನೊಡನೆ ನಿಕಟ ಒಡನಾಟ ಹಾಗೂ ಪರಿಷತ್ತಿನ ಆಜೀವ ಸದಸ್ಯತ್ವ, ಪುಣೆ ಹಾಗೂ ಶಾಂತಿನಿಕೇತನ ದಲ್ಲಿ ಭಾರತೀಯ ತತ್ವ ಶಾಸ್ತ್ರದ ಕುರಿತು ಇಂಗ್ಲೀಷ್ ನಲ್ಲಿ ಪ್ರಬಂಧ ಮಂಡನೆ, ಉತ್ತರಕನ್ನಡ ಜಿಲ್ಲಾ ಕನ್ನಡಸಾಹಿತ್ಯಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳಲ್ಲಿ ಆರು ಬಾರಿ ಅಧ್ಯಕ್ಷತೆ ಮತ್ತು ಇತರ ಅವಕಾಶಗಳು, ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಿವಮೊಗ್ಗದಲ್ಲಿ ಉಪನಿಷತ್ತುಗಳ ಕುರಿತು ದಿಕ್ಸೂಚಿ ಭಾಷಣ ಸೇರಿದಂತೆ ಆಲ್ಮನೆಯವರು ಹಲವು ಗೌರವ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದವರಾಗಿದ್ದಾರೆ.

ಇವರ ವಿವಿಧ ಪ್ರಕಾರದ ಬರಹಗಳು ನವ ಕರ್ನಾಟಕ ಪ್ರಕಾಶನ, ಅಕ್ಷಯ ಪ್ರಕಾಶನ, ಆದಿತ್ಯ ಪ್ರಕಾಶನ, ಅಧ್ಯಯನ ಪ್ರಕಾಶನ, ಪ್ರೇಮ ಪ್ರಕಾಶನ, ಶೃತಿ ಪ್ರಕಾಶನ, ಚೇತನ ಪುಸ್ತಕ ಮಾಲೆ, ಮುಂಬೈನ ಗಿರ್ವಾಣ ಸುಧಾ ಪ್ರಕಾಶನಗಳಿಂದ ಪ್ರಕಟಣೆಗೊಂಡಿರುವು ಹಾಗೂ ಕೆಲವು ಕೃತಿಗಳು ಮೂರಕ್ಕೂ ಹೆಚ್ಚುಬಾರಿ ಮರು ಮುದ್ರಣಗೊಂಡಿರುವುದು ವಿಶೇಷವಾಗಿದೆ.

error: