April 23, 2024

Bhavana Tv

Its Your Channel

ಮಾಡರ್ನ್ ಎಜ್ಯುಕೇಶನ್ ಗೋಕರ್ಣ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಗೋಕರ್ಣ:- ಸರ್ಕಾರಿ ಪ್ರೌಢಶಾಲೆ ತೆಂಗಿನ ಗುಂಡಿ ಭಟ್ಕಳ ದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಟಿ .ಜಿ .ಟಿ ವಿಭಾಗದಲ್ಲಿ ಮೊಡರ್ನ ಎಜ್ಯುಕೇಶನ್ ಗೋಕರ್ಣ ಶಾಲೆಯ ವಿದ್ಯಾರ್ಥಿ ರಜತ ಈಶ್ವರ ಗೌಡ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ “ರಾಜ್ಯ ಮಟ್ಟಕ್ಕೆ” ಆಯ್ಕೆ ಯಾಗಿರುತ್ತಾನೆ.
ಮತ್ತು ಹೊನ್ನಾವರ ಎಸ್.ಡಿ.ಎಮ್.ಕಾಲೇಜು ಮೈದಾನದಲ್ಲಿ ನಡೆದ ಹೈಸ್ಕೂಲ್ ಜಿಲ್ಲಾಮಟ್ಟದ ಕ್ರೀಡಾಕೂಟದ ಲ್ಲಿ ಗಣೇಶ ಮದನ ನಾಯಕ ಗುಂಡು ಎಸೆತದಲ್ಲಿ 13.70ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ 30.90.ಮೀ.ದೂರ ಎಸೆದು ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ , ಶಾಲೆಗೆ, ಕೀರ್ತಿ ತಂದಿರುತ್ತಾನೆ. ಸಾಧನೆಗೈದ ವಿದ್ಯಾರ್ಥಿಯನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ನಿತ್ಯಾನಂದ ಗೌಡ ಇವರನ್ನು ಮೊಡೆರ್ನ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ ನಾಯಕ ತೊರ್ಕೆ, ಉಪಾಧ್ಯಕ್ಷ ನಾಗೇಂದ್ರ ಶೇಟ್ ,ಮೆನೇಜಿಂಗ್ ಟ್ರಸ್ಟಿ ಡಾ. ಎಂ.ಡಿ.ನಾಯ್ಕ, ಶೈಕ್ಷಣಿಕ ಮಾರ್ಗದರ್ಶಕರಾದ ಮಂಜು ಹಿತ್ತಲಮಕ್ಕಿ ಮುಖ್ಯೋಪದ್ಯಾಯರಾದ ರಾಜೇಶ್ ಗೊನ್ಸಾಲ್ವಿಸ್ , ಶಿಕ್ಷಕ ವೃಂದ ದವರು ಹಾಗೂ ಕುಮಟಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಆರ್.ಎಲ್.ಭಟ್. ದೈಹಿಕ ಪರಿವೀಕ್ಷಕರಾದ ಶಿವಾನಂದ ನಾಯಕ ಮತ್ತು ಪಾಲಕರು ಅಭಿನಂದಿಸಿರುತ್ತಾರೆ.

error: