April 20, 2024

Bhavana Tv

Its Your Channel

ನಾಡಪ್ರಭು ಕೆಂಪೇಗೌಡರ ಗೋಪುರ ನಿರ್ಮಾಣಕ್ಕೆ ಹಿರೇಗುತ್ತಿಯ ಪವಿತ್ರ ಮಣ್ಣು ಸಂಗ್ರಹ

ಗೋಕರ್ಣ: ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ. ಪ್ರಗತಿಯ ಪ್ರತಿಮೆ ಆವರಣದಲ್ಲಿನ ಗೋಪುರ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮಣ್ಣು ಸಂಗ್ರಹ ಅಭಿಯಾನದ ಅಂಗವಾಗಿ ಹಿರೇಗುತ್ತಿಯಲ್ಲಿ ಶ್ರೀ ಬ್ರಹ್ಮಜಟಗ ದೇವಸ್ಥಾನದ ಹತ್ತಿರ ಹಿರೇಗುತ್ತಿ ಗ್ರಾಮ ಪಂಚಾಯತ ವತಿಯಿಂದ ಹಿರೇಗುತ್ತಿಯ ಪವಿತ್ರ ಮಣ್ಣು ನೀಡಲಾಯಿತು. ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ನೀಡಲಾಯಿತು.ಈ ಸಂಧರ್ಭದಲ್ಲಿ ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರತ್ನ ಉಮೇಶ ಗಾಂವಕರ. ವೀಣಾ ಸಣ್ಣಪ್ಪ ನಾಯಕ.ರಾಮು ಕೆಂಚನ್ ಹಿರೇಗುತ್ತಿ. ಎನ್ ರಾಮು ಹಿರೇಗುತ್ತಿ. ಸಣ್ಣಪ್ಪ ಆರ್ ನಾಯಕ.ಹರೀಶ ನಾಯಕ.ಪ್ರೀತಮ್ ಗಾಂವಕರ. ರಮಾಕಾಂತ ಹರಿಕಂತ್ರ.ವೆAಕಮ್ಮ ಹರಿಕಂತ್ರ.ಮಾದೇವಿ ಹಳ್ಳೇರ .ಮಂಗಲಾ ಹಳ್ಳೇರ. ಪಿಡಿಓ ನವೀನ ನಾಯ್ಕ.. ಕಾರ್ಯದರ್ಶಿ ಸಂಧ್ಯಾ ಗಾಂವಕರ. ವಿಠ್ಠಲ. ಬಸ್ತೇಂವ್ ಫರ್ನಾಂಡೀಸ್. ಕಮಲಾಕರ. ಹಿರೇಗುತ್ತಿ ಊರ ನಾಗರಿಕರು. ಉಪಸ್ಥಿತರಿದ್ದರು.

error: