ಹೊನ್ನಾವರ: ದಿನಾಂಕ ೨೩-೦೭-೨೦೨೧(ಇಂದು) ರಂದು ಬೆಳಿಗ್ಗೆ ಹೊನ್ನಾವರ ತಾಲೂಕಿನ ಮೊಳ್ಕೋಡ ಗ್ರಾಮದ ಸುಬ್ರಾಯ ಜಡಿಯಾ ಅಂಬಿಗ (೫೫) ಹಾಗೂ ಅವರ ಪತ್ನಿ ಮಾದೇವಿ
ಸುಬ್ರಾಯ ಅಂಬಿಗ (೪೬) ಇವರು ಶರಾವತಿ ನದಿಯಲ್ಲಿ ತಮ್ಮ ಮೀನುಗಾರಿಕಾ ದೋಣಿಯಲ್ಲಿ ಮೀನುಗಾರಿಕೆಗಾಗಿ ಹೋಗಿದ್ದಾಗ ಭಾರೀ ಗಾಳಿ ಮಳೆಗೆ ದೋಣಿ ನದಿಯಲ್ಲಿ ಮುಳುಗಿದ್ದರಿಂದ ದೋಣಿಯಲ್ಲಿದ್ದ ಮಾದೇವಿ ಸುಬ್ರಾಯ ಅಂಬಿಗ(೪೬) ಮೊಳ್ಕೋಡ ಇವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅವರ ಪತಿ ಸುಬ್ರಾಯ ಜಡಿಯಾ ಅಂಬಿಗ ಇವರು ಈಜಿಕೊಂಡು ಬಂದು ದಡ ಸೇರಿರುತ್ತಾರೆ.
ನದಿಯಲ್ಲಿ ಮುಳುಗಿ ಕಾಣೆಯಾಗಿದ್ದ ಮಾದೇವಿ ಸುಬ್ರಾಯ ಅಂಬಿಗ (೪೬) ವರ್ಷ ಮೊಳ್ಕೋಡ ಗ್ರಾಮ ಹೊನ್ನಾವರ ತಾಲೂಕು ಇವರ ಮೃತ ದೇಹವನ್ನು ಶೋಧನಾ ಕಾರ್ಯಾಚರಣೆ ಮೂಲಕ ಪತ್ತೆ ಮಾಡಿ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗುತ್ತಿದ್ದು ಈ ಬಗ್ಗೆ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರ್ಯಾಚರಣೆಯಲ್ಲಿ ಹೊನ್ನಾವರ ಸಿಪಿಐ ಶ್ರೀಧರ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’