April 25, 2024

Bhavana Tv

Its Your Channel

ಅಪಘಾತ ಮಾಡಿದ ಆರೋಪಿ ಚಾಲಕನಿಗೆ ಜೈಲು ಶಿಕ್ಷೆ

ಹೊನ್ನಾವರ: ತಾಲೂಕಿನ ಮಂಕಿ ರಾಮನಗರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅಪಘಾತ ಮಾಡಿದ ಆರೋಪಿ ಲಾರಿ ಚಾಲಕ ಮಹಾರಾಷ್ಟ್ರ ರಾಜ್ಯದ ನಿತಿನ್ ಭಗವಾನ ಕೋಳಿ ಎಂಬುವವನಿಗೆ ಹೊನ್ನಾವರದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ೧ ವರ್ಷ ೩ ತಿಂಗಳ ಜೈಲು ಶಿಕ್ಷೆ ಜೊತೆಗೆ ೧೫೦೦ ರೂ. ದಂಡ ವಿಧಿಸಿ ಗುರುವಾರ ಆದೇಶ ಹೊರಡಿಸಿದೆ.

ನ್ಯಾಯಾಧೀಶರಾದ ಕುಮಾರ ಜಿ. ಅವರು ವಿಚಾರಣೆ ನಡೆಸಿದ್ದು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ನಿತಿನ್ ಭಗವಾನ ಕೋಳಿ ಎಂಬಾತ ೨೦೧೮ರ ಜೂನ್ ೭ ರಂದು ತನ್ನ ಲಾರಿಯನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿ ರಾಮನಗರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿರುವ ವಾಹನಗಳನ್ನು ಗಮನಿಸದೇ ತನ್ನ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವಾಗ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಲಾರಿ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ವಾಹನ ಚಾಲಕನಾದ ರಾಜೇಂದ್ರ ಬಾಪು ಮೋರೆ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತರಾಗಲು ಕಾರಣನಾಗಿದ್ದಾನೆ ಎಂದು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಮಂಕಿ ಪೊಲೀಸ್ ಠಾಣೆಯ ಆಗಿನ ಎ ಎಸ್ ಐ ಎಲ್. ಪಿ. ರೆಬೆಲ್ಲೋ ಮತ್ತು ಆಗಿನ ಹೊನ್ನಾವರದ ವೃತ್ತ ನಿರೀಕ್ಷಕರಾದ ಚೆಲುವರಾಜು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ಕೆ. ಗೌಡ ಅವರು ಪ್ರಕರಣದಲ್ಲಿ ೫ ಜನ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.

error: