April 25, 2024

Bhavana Tv

Its Your Channel

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ಘಟಕದ ವತಿಯಿಂದ ಪುನೀತ್ ರಾಜ್‌ಕುಮಾರ್ ರವರಿಗೆ ನುಡಿ ನಮನ

ಹೊನ್ನಾವರದ ರಾಯಲ್ ಕೇರಿಯ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಸರಳ ಸಮಾರಂಬದಲ್ಲಿ ಹೊನ್ನಾವರ ಘಟಕದ ವತಿಯಿಂದ ನಮ್ಮನ್ನೇಲ್ಲ ಅಗಲಿದ ಕನ್ನಡಿಗರ ಮನೆ ಮಗ’, ‘ಕರುನಾಡ ಕಣ್ಮಣಿ’ ಪುನೀತ್ ರಾಜ್‌ಕುಮಾರ್ ಅವರಿಗೆ ಶೃದ್ದಾಂಜಲಿಯನ್ನು ಅರ್ಪಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಸೈದಪ್ಪ ಗುತ್ತೇದಾರ್ ಮಾತನಾಡಿ ಕರ್ನಾಟಕದ ರಾಜರತ್ನ ಪುನಿತ ರಾಜ್ ಕುಮಾರರವರನ್ನು ಕಳೆದು ಕೊಂಡ ನಮ್ಮ ನಾಡಿಗೆ ಆಘಾತ ಉಂಟಾಗಿದೆ, ಅನೇಕ ಪ್ರತಿಭೆಗಳನ್ನು ಬೆಳಸಿ ಪರಿಚಯಿಸುವ ಮೂಲಕ ಯುವಕರಿಗೆ ಸ್ಪೂರ್ತಿ ಆಗಿದ್ದರು ಅವರ ಚಿಂತನೆ ಮತ್ತು ಯೋಚನೆಗಳನ್ನ ಜೀವಂತವಾಗಿ ಇಡುವ ಕೆಲಸ ನಾವುಗಳು ಮಾಡಬೇಕಾಗಿದೆ, ಅವರ ಸಮಾಜ ಸೇವೆ ಮತ್ತು ಅವರ ಸರಳ ಜಿವನದ ಬಗ್ಗೆ ಮಾತನಾಡಿದ ಅವರು ಅವರನ್ನ ಕಳೆದು ಕೊಂಡ ನೋವು ಮರೆಯಲು ಸಾದ್ಯವಿಲ್ಲ ಎಂದ ಅವರು ಅವರ ಆತ್ಮಕ್ಕೆ ಶಾಂತಿಕೋರಿ ಪುಷ್ಪಾರ್ವನೆ ಮಾಡಿ ನಮನ ಸಲ್ಲಿಸಿದರು.

ಸಂಘದ ಸದಸ್ಯರು ಈ ಸಂದರ್ಬದಲ್ಲಿ ಹಾಜರಿದ್ದು ಪುಷ್ಪನಮನ ಸಲ್ಲಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ಘಟಕದ ತಾಲೂಕಾಧ್ಯಕ್ಷ ಧನಂಜಯ ನಾಯ್ಕ ರೊಯಲ್ ಕೇರಿ, ಪ್ರಯೋಗಾಲು ತಂತ್ರಜ್ಞ ವಿನಾಯಕ ನಾಯ್ಕ ಪ್ರಭಾತನಗರ, ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ ಗೇರಸಪ್ಪ, ಗೌರವಾಧ್ಯಕ್ಷ ರಾಮನಾಥ ನಾಯ್ಕ ಉಪಾಧ್ಯಕ್ಷರಾದ ದಿನೇಶ್ ನಾಯ್ಕ್, ಸಹ ಕಾರ್ಯದರ್ಶಿಗಳಾದ ಅವಿನಾಶ್ ನಾಯ್ಕ ,ಖಜಾಂಚಿಗಳಾದ ಶ್ರೀನಾಥ ನಾಯ್ಕ್ , ಕಾರ್ಮಿಕ ಘಟಕ ಅಧ್ಯಕ್ಷರಾದ ನಾಗರಾಜ್ ನಾಯ್ಕ್ , ಚಾಲಕ ಘಟಕ ಅಧ್ಯಕ್ಷರಾದ ಗಣಪತಿ ನಾಯ್ಕ , ವ್ಯಾಪಾರಸ್ಥ ಘಟಕದ ಅಧ್ಯಕ್ಷರಾದ ಪ್ರದೀಪ್ ನಾಯ್ಕ್ , ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ ನಾಯ್ಕ್ , ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸಂದೀಪ್ ನಾಯ್ಕ್ , ಸಹ ಸಂಚಾಲಕರಾದ ಪ್ರದೀಪ್ ನಾಯಕ್ , ಹಿರಿಯ ಸಲಹಾ ಸಮಿತಿ ಸದಸ್ಯರು ಪಾಂಡುರAಗ ನಾಯ್ಕ್ ಹಾಗೂ ಕುಮಾರ್ ನಾಯಕ್ ಹಾಜರಿದ್ದರು.

.
.

error: