ಹೊನ್ನಾವರ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ)ಹೊನ್ನಾವರ ಇವರ ಮಾರ್ಗದರ್ಶನದಲ್ಲಿ ಪರಮಪೂಜ್ಯ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ “ಡಿಜಿಟಲ್ ಸೇವಾ ಕಾರ್ಯಕ್ರಮ” ಹೊನ್ನಾವರ ವಲಯದ ಕರ್ಕಿಯಲ್ಲಿ ಪ್ರಾರಂಭಗೊAಡಿತು.
ಕಾರ್ಯಕ್ರಮವನ್ನು ನಿಕಟಪೂರ್ವ ತಾ.ಪಂ.ಸದಸ್ಯರಾದ ತುಕಾರಾಮ್ ನಾಯ್ಕ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ, ಹೆಗ್ಗಡೆಯವರು ಮನುಕುಲದ ಉದ್ದಾರಕ್ಕೆಂದೇ ಬಂದ ದೈವೀ ಪುರುಷರು.ಸಮಾಜದ ಕುಂದು ಕೊರತೆಗಳನ್ನು ಗುರುತಿಸಿ,ಸೂಕ್ತ ಯೋಜನೆಗಳನ್ನು ರೂಪಿಸಿ ಗ್ರಾಮಾಭಿವ್ರದ್ಧಿ ಯೋಜನೆಯ ಮೂಲಕ ಪಾರದರ್ಶಕವಾಗಿ ಅನುಷ್ಠಾನ ಮಾಡುತ್ತಿದ್ದು ಸಮಾಜದ ಪ್ರತಿಯೊಬ್ಬರೂ ಇದನ್ನು ಸದ್ಬಳಕೆ ಮಾಡಿಕೊಂಡು ಧನ್ಯತಾ ಭಾವದೊಂದಿಗೆ ಸ್ವಾವಲಂಬಿ ಜೀವನ ನಡೆಸಿರಿ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಾಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ವಾಸಂತಿ ಅಮಿನ್ ಪ್ರಾಸ್ತಾವಿಕ ಮಾತನಾಡಿ ಯೋಜನೆಯ ಸೇವಾಕಾರ್ಯಗಳ ಬಗ್ಗೆ ಮಾಹಿತಿ ನೀಡಿ ರಾಜ್ಯಾದ್ಯಂತ ಡಿಜಿಟಲ್ ಸೇವಾಕೇಂದ್ರದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ 720 ಕ್ಕೂ ಅಧಿಕ ಸೇವೆಗಳನ್ನು ನೀಡುವ ಯೋಚನೆಯೊಂದಿಗೆ ಪ್ರಸ್ತುತ ಸಂಪೂರ್ಣ ಉಚಿತವಾಗಿ ಸಾರ್ವಜನಿಕರಿಗೆ ಈ ಶ್ರಮ್ ಕಾರ್ಡ ಮಾಡಿಸಿಕೊಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕರ್ಕಿ ಗ್ರಾ.ಪಂ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಭಟ್ ಭಾಗವಹಿಸಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.
ಕರ್ಕಿ ಮಹಿಳಾ ಮಂಡಳದ ಅಧ್ಯಕ್ಷ ರಾದ ಶ್ರೀಮತಿ ಅಹಲ್ಯಾ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸರ್ಕಾರದ ಜನಪರ ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಡಿಜಿಟಲ್ ಸೇವಾ ಕೇಂದ್ರದ ಮೂಲಕ ಸಾಕಾರಗೊಳಿಸುತ್ತಿದ್ದು ಅಭಿನಂದನೀಯ ವಿಷಯವಾಗಿದೆ.ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುವ ಮೂಲಕ ಹಗ್ಗಡೆಯವರ ಸೇವಾಕಾರ್ಯದಲ್ಲಿ ಭಾಗಿಯಾಗೋಣ ಎಂದರು.
ಕಾರ್ಯಕ್ರಮದಲ್ಲಿ ಆಯ್ದ ಸದಸ್ಯರಿಗೆ ಸ್ಥಳದಲ್ಲೇ ನೊಂದಾಯಿಸಿ ಈ ಶ್ರಮ್ ಕಾರ್ಡ್ ದಾಖಲಾತಿ ವಿತರಿಸಲಾಯಿತು.
ಹೊನ್ನಾವರ ವಲಯ ಮೇಲ್ವಿಚಾರಕ ನಾಗರಾಜ್.ಕೆ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಜಯಲಲಿತಾ ಸ್ವಾಗತಿಸಿ,ಸೇವಾ ಪ್ರತಿನಿಧಿ ದೀಪಾ ವಂದಿಸಿದರು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಉಮೇಶ್ ,ಒಕ್ಕೂಟದ ಪದಾಧಿಕಾರಿಗಳು,ಪಾಲುದಾರರು,ಡಾಟಾ ಆಪರೇಟರ್ ಕುಮಾರಿ ನಯನಾ ಪಾಲ್ಗೊಂಡಿದ್ದರು.
More Stories
ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಕೊನೆಯ ಹಂತದ ಕಾಮಗಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ ಆರೋಪ
ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್.
ಕಡತೋಕಾದಲ್ಲಿ ಸಂಪನ್ನಗೊAಡ ಯಕ್ಷರಂಗೋತ್ಸವ-24