April 19, 2024

Bhavana Tv

Its Your Channel

ಹೊನ್ನಾವರ ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ

ಹೊನ್ನಾವರ ; ಪ್ರತಿಯೊಬ್ಬರ ದಿನಚರಿಯನ್ನು ಪ್ರಶ್ನಿಸಿದ ಅವರು ಶುಕ್ರವಾರ ಇಡೀ ದಿನ ಮಾಡಿದ ಕೆಲಸಗಳ ಬಗ್ಗೆ ವಿಚಾರಣೆ ನಡೆಸಿದರು. ಕಚೇರಿ ಕೆಲಸ ಕಾರ್ಯಗಳು ನಿಧಾನಗತಿಯಿಂದ ಸಾಗುತ್ತಿದ್ದು, ಈ ವಿಳಂಬದಿAದ ಸಾರ್ವಜನಿಕರು ಪರದಾಡುತ್ತಿರುವುದನ್ನು ಗಮನಿಸಿದ ಅವರು ವಿವಿಧ ವಿಭಾಗಗಳ ಫೈಲ್ ಗಳನ್ನು ತೆಗೆಯಿಸಿ ಪರಿಶೀಲಿಸಿದರು. ಕೆಲವು ಸಿಬ್ಬಂದಿಗಳ ಗೈರಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕಚೇರಿಯಲ್ಲಿ ಉದಾಸೀನತೆಗೆ ಅವಕಾಶವಿಲ್ಲ. ಯಾವ ಕೆಲಸವನ್ನೂ ಅನಾವಶ್ಯಕ ಬಾಕಿ ಉಳಿಸುವಂತಿಲ್ಲ. ಕೆಲಸದ ಅವಧಿಯನ್ನು ನಿರಾಯಾಸವಾಗಿ ಕಳೆದು ಜನರಿಗೆ ಸಮಸ್ಯೆಯೊಡ್ಡಿ, ಸರ್ಕಾರಕ್ಕೂ ಹೊರೆ ಆಗುವಂಥ ಸಿಬ್ಬಂದಿ ನಮಗೆ ಅವಶ್ಯಕತೆಯಿಲ್ಲ. ಗಮನಕ್ಕೆ ಬಂದರೆ ಕೆಲಸ ಕಳೆದುಕೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು.

error: