April 24, 2024

Bhavana Tv

Its Your Channel

ಮಂಕಿ ಚಿತ್ತಾರದಲ್ಲಿ ಗುರುಕೃಪಾ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆ ಉದ್ಘಾಟನೆ

ಹೊನ್ನಾವರ ತಾಲ್ಲೂಕಿನ ಮಂಕಿ ಚಿತ್ತಾರದಲ್ಲಿ ಗುರುಕೃಪಾ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆಯನ್ನು ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು.

ಭಟ್ಕಳ : ಸಹಕಾರಿ ಸಂಘಗಳು ಬಡವರಿಗೆ ಕಷ್ಟ ಕಾಲದಲ್ಲಿ ನೆರವಾಗುವ ಆಪತ್ಬಾಂಧವ. ಆ ನಿಟ್ಟನಲ್ಲಿ ಮಂಕಿ ಚಿತ್ತಾರದಲ್ಲಿ ಹೊಸದಾಗಿ ಶಾಖೆ ಆರಂಭಿಸಿರುವ ಗುರುಕೃಪಾ ಸಹಕಾರಿ ಸಂಘ ಈ ಭಾಗದ ಜನರಿಗೆ ಅಪತ್ಬಾಂಧವನಾಗಿ ಕೆಲಸ ಮಾಡಿ ಎತ್ತರಕ್ಕೆ ಬೆಳೆಯಲಿ, ಗುರುಗೃಪಾ ಸಹಕಾರಿ ಸಂಘವನ್ನು ಹಲವು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಈ ಸಂಘವು ಭಟ್ಕಳದಲ್ಲಿ ಹಲವು ಶಾಖೆಗಳನ್ನು ತೆರೆದು ಉತ್ತಮವಾಗಿ ಕಾರ್ಯನಿರ್ವಸುತ್ತಿದೆ. ಈ ಭಾಗದ ಜನರಿಗೆ ಈ ಸಹಕಾರಿ ಸಂಘದಿAದ ಅನುಕೂಲವಾಗಿ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ ಗುರುಕೃಪಾ ಸಹಕಾರಿ ಸಂಘವು ಭಟ್ಕಳದಲ್ಲಿ 4 ಶಾಖೆಯನ್ನು ಹೊಂದಿದೆ. ಎಲ್ಲಾ ಶಾಖೆಗಳು ಲಾಭದಲ್ಲಿ ನಡೆಯುತ್ತಿದ್ದು ಕಳೆದ ಸಾಲಿನಲ್ಲಿ 50 ಲಕ್ಷ ನಿವ್ವಳ ಲಾಭ ಗಳಿಸಿದೆ. ಗ್ರಾಮೀಣ ಭಾಗದ ಜನರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಶಾಖೆ ತೆರಯಲಾಗಿದೆ. ಈ ಭಾಗದ ಜನರು ಬ್ಯಾಂಕಿನ ಜೊತೆ ಕೈಗೂಡಿಸಿ ಉತ್ತಮ ಲೇವಾದೇವಿ ವ್ಯವಹಾರ ನಡೆಸಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶಾಸಕ ಸುನೀಲ ನಾಯ್ಕ ಹಾಗೂ ಕಟ್ಟಡ ಮಾಲಿಕ ಹೊನ್ನಾವರ ತಾಲ್ಲೂಕು ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅಣ್ಣಯ್ಯ ನಾಯ್ಕ ಅವರನ್ನು ಗುರುಕೃಪಾ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಗುರುಕೃಪಾ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ನಾಯ್ಕ ನಿರ್ದೇಶಕರಾದ ವೆಂಕಟೇಶ ನಾಯ್ಕ, ಸುರೇಶ ನಾಯ್ಕ, ರಾಜೇಶ ನಾಯ್ಕ, ಹರೀಶ ನಾಯ್ಕ, ಶಬರೀಶ ನಾಯ್ಕ, ಸತೀಶ ನಾಯ್ಕ, ಕುಮಾರ ನಾಯ್ಕ, ಜಯಂತ ಗೊಂಡ, ಸುರೇಶ ಮೊಗೇರ,ಭಾರತಿ ನಾಯ್ಕ,ವಿಜಯಾ ನಾಯ್ಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಾಸು ನಾಯ್ಕ ಇದ್ದರು

error: